- ಪೂಜಾ. ಬಿ
೫ನೇ ತರಗತಿ
ರಾಜು ಆ ದಿನ ಬೇಗನೆ ಎದ್ದನು. ಕಿಟಕಿಯಿಂದ ಹೊರಗೆ ನೋಡಿದನು. ಅಯ್ಯೋ, ಹೇಗಪ್ಪಾ ಶಲೆಗೆ ಹೋಗುವುದು ಎಂದು ಚಿಂತಿಸಿದನು. ಅವನು ಅವನ ದಿನನಿತ್ಯದ ಕೆಲಸಗಳನ್ನು ಮಾಡಿದನು. ಆ ಹೊತ್ತಿಗೆ ತಂಗಿ ರಮ್ಯಾ ಶಾಲೆಗೆ ಹೊರಟು ನಿಂತಿದ್ದಳು. ಧಾರಾಕಾರ ಮಳೆಯಲ್ಲಿಯೇ ಅವರಿಬ್ಬರು ಶಾಲೆಗೆ ಹೋದರು. ನಡೆಯುತ್ತಾ ನಡೆಯುತ್ತಾ ಮುಂದೆ ಸಾಗಿದರು. ಮಳೆಯಲ್ಲಿ ಆಟ ಆಡುತ್ತಾ ಮುಂದೆ ಹೋಗಿ ತೋಡಿನ ಬದಿ ತಲಪಿದರು.ತೋಡಿನಲ್ಲಿ ತುಂಬಾ ಕೆಂಪು ನೀರಿತ್ತು. ನೀರಿನಲ್ಲಿ ಏನೋ ತೇಲುತ್ತಿರುವುದನ್ನು ರಾಜು ಕಂಡನು. ಕುತೂಹಲದಿಂದ ಬಗ್ಗಿ ನೋಡಿದನು. ಕೂಡಲೇ ಕಾಲು ಜಾರಿ ಬಿದ್ದನು. ಆಗ ಅವನ ತಂಗಿ ಅಯ್ಯೋ ಎಂದು ಜೋರಾಗಿ ಕೂಗಿದಳು. ಆಗ ಗದ್ದೆ ಕೆಲಸ ಮಾಡುವವರು ಒಡಿ ಬಂದರು. ಆಗಲೂ ರಮ್ಯಾ ಜೋರಾಗಿ ಕೂಗುತ್ತಿದ್ದಳು. ಅಣ್ಣ ನೀರಿಗೆ ಬಿದ್ದ ಕಾಪಾಡಿ ಎಂದು ಹೇಳಿದಳು. ಆಗ ಕೆಲಸದವರು ನೀರಿಗೆ ಹಾರಿ ಈಜಿಕೊಂಡು ಹೋದರು.
ಸ್ವಲ್ಪ ದೂರದಲ್ಲಿ ತೋಡಿನ ಬದಿಯಲ್ಲಿ ರಾಜುವನ್ನು ಕಂಡರು. ಅವನು ಒಂದು ಮರದ ಬೇರನ್ನು ಗಟ್ಟಿಯಾಗಿ ಹಿಡಿದಿದ್ದನು. ಕೆಲಸಗಾರರು ಅವನನ್ನು ಎತ್ತಿ ಮೇಲೆ ತಂದರು. ಅಲ್ಲಿಗೆ ಓಡಿ ಬಂದ ರಮ್ಯಾಳಿಗೆ ಸಂತೋಷವಾಯಿತು. ಅಣ್ಣನನ್ನು ರಕ್ಷಿಸಿದ ಕೆಲಸಗಾರರಿಗೆ ಧನ್ಯವಾದ ಹೇಳಿದಳು. ಮನೆಗೆ ಹಿಂತಿರುಗಿ ಉಡುಪು ಬದಲಾಯಿಸಿ ಶಾಲೆಗೆ ಹೋದರು. ಆಗಲೇ ಶಾಲೆ ಪ್ರಾರಂಭವಾಗಿತ್ತು.
ತಡವಾದ ಕಾರಣವನ್ನು ಅಧ್ಯಾಪಿಕೆ ಕೇಳಿದರು. ರಾಜು ದಾರಿಯಲ್ಲಿ ಬರುವಾಗ ನಡೆದ ಘಟನೆಯನ್ನು ವಿವರಿಸಿದನು. ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯ, ಸಂತೋಷವಾಯಿತು. ಆಗ ಅಧ್ಯಾಪಿಕೆಯು “ನೋಡಿ ಮಕ್ಕಳೇ, ನೀವು ಶಾಲೆಗೆ ಬರುವಾಗ ನೀರಿನಲ್ಲಿ ಆಟವಾಡದೆ ನೇರವಾಗಿ ಬರಬೇಕು. ತೋಡಿನ ಬದಿಯಲ್ಲಿ ಜಾಗರೂಕತೆಯಿಂದ ನಡೆಯಬೇಕು” ಎಂದು ಹಿತವಚನವನ್ನು ಹೇಳಿದರು.
ಉತ್ತಮವಾಗಿದೆ,. ಹೀಗೆ ಮುಂದುವರೆಯಲಿ..
ReplyDelete