Jun 17, 2011

ಮೊನ್ನೆ ಚುನಾವಣೆ ನಮ್ಮ ಶಾಲಾ ಮಟ್ಟದ್ದು. ವಿದ್ಯಾರ್ಥಿ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ನಡೆದ ಸ್ಪರ್ಧೆಗೆ ಐದು ಮಂದಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು. ಫಲಿತಾಂಶದಲ್ಲಿ ಅತ್ಯಧಿಕ ಮತ ಪಡೆದ ಹತ್ತನೇ ತರಗತಿ ವಿದ್ಯಾರ್ಥಿ ಬೆಂಗಳೂರಿನ ಸುಹಾಸ್ ಜಿ.ಕಾಕತ್ಕರ್ ವಿದ್ಯಾರ್ಥಿ ನಾಯಕನಾಗಿಯೂ, ದ್ವಿತೀಯ ಸ್ಥಾನ ಪಡೆದ ಕಿರಣ್ ಮಹೇಶ್ ವಿದ್ಯಾರ್ಥಿ ಉಪನಾಯಕನಾಗಿಯೂ ಆಯ್ಕೆಯಾಗಿದ್ದಾರೆ. ಈ ವರ್ಷದ ಶಾಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದಕ್ಕೊಯ್ಯಲು ಅವರ ಜೊತೆ ಹತ್ತು ಮಂದಿ ವಿದ್ಯಾರ್ಥಿಗಳ ಮಂತ್ರಿ ಮಂಡಲವೂ ಕಾರ್ಯ ನಿರ್ವಹಿಸಲಿದೆ. ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇವೆ.

Jun 7, 2011

ವಿಶ್ವ ಪರಿಸರ ದಿನ


ಮೊನ್ನೆ ವಿಶ್ವ ಪರಿಸರ ದಿನ. ಆದರೆ ಭಾನುವಾರವಾದ್ದರಿಂದ ತಾಂತ್ರಿಕ ಕಾರಣಗಳಿಂದಾಗಿ ಆ ದಿನವೇ ಕಾರ್ಯಕ್ರಮ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ವಿದ್ಯಾರ್ಥಿಗಳೆಲ್ಲ ಆಸಕ್ತಿಯಿಂದ ತಂದ ವಿವಿಧ ಗಿಡಗಳನ್ನು ಪರಸ್ಪರ ಹಂಚಿ ಕಾರ್ಯಕ್ರಮವನ್ನು ಆಚರಿಸಿಕೊಂಡೆವು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್.ಪ್ರಸಾದ್, ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶಿಕ್ಷಕಿ ಶಿವಕುಮಾರಿ ವೃಕ್ಷಾರೋಪಣಗೈದರು. ಚಿತ್ರಾ ಮಾತಾಶ್ರೀ ಮತ್ತು ಗಾಯತ್ರಿ ಮಾತಾಶ್ರೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

Jun 1, 2011

ಸ್ವಾಗತ ಭಾರತೀ...

ಹೊಸ ಅಧ್ಯಯನ ವರ್ಷಕ್ಕೆ ಕಾಲಿರಿಸಿದ್ದೇವೆ. ಇಂದು ಶುಭಾರಂಭ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅವರಿಂದ. ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್,  ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಇವರ ಉಪಸ್ಥಿತಿ ಕಾರ್ಯಕ್ರಮದಲ್ಲಿತ್ತು.
ಕುಮಾರಿ ಸುಧಾ ಮತ್ತು ತಂಡದವರಿಂದ ಪ್ರಾರ್ಥನೆ. ಅನುಷಾ ಸ್ವಾಗತ, ಶ್ರೀವಲ್ಲಿ ವಂದನಾರ್ಪಣೆ, ಸುಪ್ರೀತಾ.ಎಂ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮದ ಔಪಚಾರಿಕ ಭಾಗ.
ಮುಂದಿನದ್ದು ಏನಿದ್ದರೂ ಹತ್ತಕ್ಕೆ ಏರುವ ಹೊತ್ತಿನ ಕಾರ್ಯಕ್ರಮಗಳು. ಈ ನಿಟ್ಟಿನಲ್ಲಿ ಶಾಲಾರಂಭವಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ನಮ್ಮ ಮೊದಲ ತಂಡದ ವಿದ್ಯಾರ್ಥಿಗಳಿಗೆ ಶುಭಾಶಯಗಳು...