Oct 31, 2012

ಪ್ರತಿಭಾ ಭಾರತೀ - ಅಕ್ಟೋಬರ್ 2012

ಅಕ್ಟೋಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮವು ನಿನ್ನೆ, 30.10.2012 ಮಂಗಳವಾರ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕ ಕೇಶವ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿದ್ಯಾರ್ಥಿ ಕುಮಾರ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕವಿತಾ ಸ್ವಾಗತಿಸಿ ವೈಶಾಲಿ ವಂದಿಸಿದರು. ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಾದ ಶ್ರೀಜಾ ಹಾಗೂ ಲಕ್ಷ್ಮಣ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಜೊತೆಯಲ್ಲಿ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.

Oct 24, 2012

ಶ್ರೀ ಶಾರದಾ ಪೂಜಾ - 2012

ನಮ್ಮ ವಿದ್ಯಾಪೀಠದಲ್ಲಿ  ಇಂದು (24.10.2012 ಬುಧವಾರ) ಜರಗಿದ ‘ಶ್ರೀ ಶಾರದಾ ಪೂಜಾ’ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ ಪೂಜೆ ನೆರವೇರಿಸಿ ಪುಟಾಣಿಗಳಿಗೆ ಅಕ್ಷರಾಭ್ಯಾಸ ನೆರವೇರಿಸಿದರು.

‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’

ನಮ್ಮ ವಿದ್ಯಾಪೀಠದಲ್ಲಿ 21.10.2012 ಭಾನುವಾರ ಜರಗಿದ ‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಬೆಂಗಳೂರಿನ ಶಿಕ್ಷಕ ಸುನಿಲ್ ಮತ್ತು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಬೆ-ಮಾರ್ಗ ಶಿಕ್ಷಕರಿಗೆ ತರಬೇತಿ ನೀಡಿದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಭಾನುವಾರದ ವಿರಾಮವನ್ನು ಬದಿಗಿರಿಸಿ ಶಿಕ್ಷಕರು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದಿಂದಲೂ ಶಿಕ್ಷಕರು ಆಗಮಿಸಿದ್ದುದರಿಂದ ಕಾರ್ಯಕ್ರಮವು ಹೆಚ್ಚು ಮಹತ್ವ ಪಡೆದುಕೊಂಡಿತು.

Oct 4, 2012

ಸೇವನಾ ದಿನ

ಮೊನ್ನೆ ಗಾಂಧಿ ಜಯಂತಿಯನ್ನು ‘ಸೇವನಾ ದಿನ’ವಾಗಿ ಆಚರಿಸಿದೆವು. ಶಾಲಾ ವಿದ್ಯಾರ್ಥಿಗಳ ಜೊತೆ, ಅವರ ಹೆತ್ತವರು ಮತ್ತು ಶಿಕ್ಷಕರು ಸೇರಿ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಮಧ್ಯಾಹ್ನ ಭೋಜನವನ್ನು ತಯಾರಿಸಿ ಉಳಿದವರಿಗೆಲ್ಲ ಬಡಿಸಿದರು. ಅರ್ಥಪೂರ್ಣವಾಗಿ ಗಾಂಧೀ ಜಯಂತಿಯನ್ನು ಆಚರಿಸಿದ ಸಂತಸ ಸದ್ಯಕ್ಕೆ ನಮ್ಮನ್ನು ಆವರಿಸಿದೆ.

ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’


ಕಳೆದ 28.09.2012 ಶುಕ್ರವಾರದಂದು ನಮ್ಮ ವಿದ್ಯಾಪೀಠದಲ್ಲಿ ಸೆಪ್ಟೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮ ಜರಗಿತು. ಸಮಾಜ ಸೇವಕಿ, ನಿವೃತ್ತ ಶಿಕ್ಷಕಿ ಜಯಲಕ್ಷ್ಮಿ ಕಾರಂತ್ ವಿಶೇಷ ‘ರಸಪ್ರಶ್ನೆ’ ನಡೆಸುವ ಮೂಲಕ  ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಿದರು.ಶಾಲಾ ವಿದ್ಯಾರ್ಥಿ ಅರುಣ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ-ಮಾರ್ಗ ಉಪಸ್ಥಿತರಿದ್ದರು.