ನಮ್ಮ ವಿದ್ಯಾಪೀಠದಲ್ಲಿ 21.10.2012 ಭಾನುವಾರ ಜರಗಿದ ‘ಶಿಕ್ಷಕರ ವಿಶೇಷ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರ’ದಲ್ಲಿ ಬೆಂಗಳೂರಿನ ಶಿಕ್ಷಕ ಸುನಿಲ್ ಮತ್ತು ಶಾಲಾ ಮುಖ್ಯ ಶಿಕ್ಷಕ ಶ್ಯಾಮ ಭಟ್ ದರ್ಬೆ-ಮಾರ್ಗ ಶಿಕ್ಷಕರಿಗೆ ತರಬೇತಿ ನೀಡಿದರು. ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು. ಭಾನುವಾರದ ವಿರಾಮವನ್ನು ಬದಿಗಿರಿಸಿ ಶಿಕ್ಷಕರು ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದಿಂದಲೂ ಶಿಕ್ಷಕರು ಆಗಮಿಸಿದ್ದುದರಿಂದ ಕಾರ್ಯಕ್ರಮವು ಹೆಚ್ಚು ಮಹತ್ವ ಪಡೆದುಕೊಂಡಿತು.
Oct 24, 2012
Subscribe to:
Post Comments (Atom)
No comments:
Post a Comment