Dec 31, 2010
ಹೊಸ ವರ್ಷದ ಶುಭಾಶಯಗಳು...
ನಮ್ಮ ಸಂಸ್ಕೃತಿಯಲ್ಲಿ ನಾಳೆ ಹೊಸ ವರ್ಷ ಅಲ್ಲ. ಆದರೂ ವ್ಯಾವಹಾರಿಕವಾಗಿ ಈ ಕ್ಯಾಲೆಂಡರಿಗೆ ನಾವು ಒಗ್ಗಿ ಹೋಗಿದ್ದೇವೆ. ಕ್ಯಾಲೆಂಡರ್ ಬದಲುವ ಈ ವೇಳೆಯಲ್ಲಿ ನಿಮಗೆಲ್ಲ 2011ರ ಶುಭಾಶಯಗಳು.
Dec 22, 2010
ನಿಲ್ಲು ಚಂದಿರ
ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ನನ್ನ ಬಿಟ್ಟು ಏಕೆ ನೀನು
ಓಡಿ ಹೋಗುವೆ..!
ಹಗಲಿನಲ್ಲಿ ಹೋದೆ ನೀ
ಎಲ್ಲಿ ಚಂದಿರ
ಇರುಳಿನಲ್ಲಿ ಎಲ್ಲಿ ಇದೆ
ನಿನ್ನ ಮಂದಿರ...!
ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ಚೆಲ್ಲು ಚೆಲ್ಲು ಸುಂದರ
ಬೆಳದಿಂಗಳ ನೋಡುವೆ
ಎಲ್ಲಿ ಓಡುವೆ
ನನ್ನ ಬಿಟ್ಟು ಏಕೆ ನೀನು
ಓಡಿ ಹೋಗುವೆ..!
ಹಗಲಿನಲ್ಲಿ ಹೋದೆ ನೀ
ಎಲ್ಲಿ ಚಂದಿರ
ಇರುಳಿನಲ್ಲಿ ಎಲ್ಲಿ ಇದೆ
ನಿನ್ನ ಮಂದಿರ...!
ನಿಲ್ಲು ನಿಲ್ಲು ಚಂದಿರ
ಎಲ್ಲಿ ಓಡುವೆ
ಚೆಲ್ಲು ಚೆಲ್ಲು ಸುಂದರ
ಬೆಳದಿಂಗಳ ನೋಡುವೆ
-- ಶ್ವೇತಾ.ಕೆ
ಆರನೇ ತರಗತಿ
Dec 15, 2010
ಜಾದೂ...
ಮೊನ್ನೆ ಸೋಮವಾರ ನಮ್ಮ ಸಂಸ್ಥೆಗೆ ಉಡುಪಿ ಜಿಲ್ಲೆಯ ಪಾಂಗಾಳದಲ್ಲಿರುವ ಗೋಪಾಲಕೃಷ್ಣ ಶೆಣೈ ಬಂದಿದ್ದರು. ಶಾಲಾ ವಿದ್ಯಾರ್ಥಿಗಳಿಗೆ ಅವರು ಪರಿಚಿತರು. ಶಾಲೆಗಳಿಗೆ ಭೇಟಿ ನೀಡಿ ಜಾದೂ ಪ್ರದರ್ಶನ ನಡೆಸುವುದು ಅವರ ಹವ್ಯಾಸ. ಅವರ ಜಾದೂ ಪ್ರದರ್ಶನ ವಿದ್ಯಾರ್ಥಿಗಳಿಗೆ ಕುತೂಹಲದ ಕ್ಷಣವನ್ನು ಒದಗಿಸಿತು.
Dec 11, 2010
ಐಟಿ ಪ್ರೋಜೆಕ್ಟ್
ಶಾಲಾ ಸುದ್ದಿಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ತಡವಾಗಿದ್ದಕ್ಕೆ ಕ್ಷಮೆ ಇರಲಿ. ಮಧ್ಯಾವಧಿ ಪರೀಕ್ಷೆಗಳು, ಪಠ್ಯೇತರ ಚಟುವಟಿಕೆಗಳ ನಡುವೆ ಈ ಕಡೆ ತಲೆ ಹಾಕಲು ಸಾಧ್ಯವಾಗಿಲ್ಲ. ಆದರೆ ಈ ನಡುವೆಯೂ ನಮ್ಮ ವಿದ್ಯಾರ್ಥಿಗಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗಿಗಳಾಗಿದ್ದರು ಎಂಬುದನ್ನು ತಿಳಿಸಲು ಸಂತಸವಾಗುತ್ತಿದೆ. ಅಂತಹದ್ದೇ ಒಂದು ಕಾರ್ಯಕ್ರಮ ನಿನ್ನೆ ನಡೆಯಿತು.
ಐಟಿ ಕ್ಲಬ್ ಆರಂಭವಾದ ನಂತರ ನಡೆದ ಕೆಲವಾರು ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೋಜೆಕ್ಟನ್ನು ನಿನ್ನೆ ಸಭೆಯಲ್ಲಿ ಪ್ರದರ್ಶಿಸಿದರು. ಶಿಖರಗಳು, ನಮ್ಮ ವಿಶ್ವ ಮತ್ತು ಗ್ರಹಗಳ ಬಗ್ಗೆ ಸಿದ್ಧ ಪಡಿಸಿದ ಪ್ರತ್ಯೇಕ ಪ್ರೋಜೆಕ್ಟ್ ಗಳನ್ನು ಅವರು ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ ಮಾರ್ಗ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ್ ಮಹೇಶ್ ವಂದಿಸಿದರು. ವೈಶಾಲಿ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು.
ಐಟಿ ಕ್ಲಬ್ ಆರಂಭವಾದ ನಂತರ ನಡೆದ ಕೆಲವಾರು ಚಟುವಟಿಕೆಗಳ ಭಾಗವಾಗಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೋಜೆಕ್ಟನ್ನು ನಿನ್ನೆ ಸಭೆಯಲ್ಲಿ ಪ್ರದರ್ಶಿಸಿದರು. ಶಿಖರಗಳು, ನಮ್ಮ ವಿಶ್ವ ಮತ್ತು ಗ್ರಹಗಳ ಬಗ್ಗೆ ಸಿದ್ಧ ಪಡಿಸಿದ ಪ್ರತ್ಯೇಕ ಪ್ರೋಜೆಕ್ಟ್ ಗಳನ್ನು ಅವರು ಮಂಡಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ ಮಾರ್ಗ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಕಂಪ್ಯೂಟರ್ ಶಿಕ್ಷಕಿ ಶಿವಕುಮಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ್ ಮಹೇಶ್ ವಂದಿಸಿದರು. ವೈಶಾಲಿ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು.
Subscribe to:
Posts (Atom)