ನಮ್ಮ ಸಂಸ್ಕೃತಿಯಲ್ಲಿ ನಾಳೆ ಹೊಸ ವರ್ಷ ಅಲ್ಲ. ಆದರೂ ವ್ಯಾವಹಾರಿಕವಾಗಿ ಈ ಕ್ಯಾಲೆಂಡರಿಗೆ ನಾವು ಒಗ್ಗಿ ಹೋಗಿದ್ದೇವೆ. ಕ್ಯಾಲೆಂಡರ್ ಬದಲುವ ಈ ವೇಳೆಯಲ್ಲಿ ನಿಮಗೆಲ್ಲ 2011ರ ಶುಭಾಶಯಗಳು.
ಮುಜುಂಗಾವಿನ ಶಾಂತ, ಸುಂದರ ಪರಿಸರದಲ್ಲಿ ಪುಟ್ಟ ಮಕ್ಕಳ ಜ್ಞಾನ ದಾಹವನ್ನು ತಣಿಸುವ ನಿಟ್ಟಿನಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ನಿರ್ದೇಶನದಂತೆ ತಲೆಯೆತ್ತಿದ ಸಂಸ್ಥೆ ಶ್ರೀ ಭಾರತೀ ವಿದ್ಯಾಪೀಠ.
ಕೇರಳ ರಾಜ್ಯದ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ೪ ಕಿಲೋಮೀಟರ್ ದೂರದಲ್ಲಿರುವ ಈ ಸಂಸ್ಥೆಗೆ ಈಗ ಎಂಟರ ಹರೆಯ. ಶಾಲಾ ಜೀವನದ ಸುಖ ಹಂಚಿಕೊಳ್ಳುವುದಕ್ಕಾಗಿ ನಿಮ್ಮ ಎದುರು ಈ ಬ್ಲಾಗ್ ತೆರೆದಿರಿಸಿದ್ದೇವೆ. ಶಾಲಾ ವರದಿಗಳು, ನಾವು ಬರೆದ ಕಥೆ, ಕವನ, ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ. ಓದಿ, ಅಭಿಪ್ರಾಯ ತಿಳಿಸಿ...
ನಿಮಗೂ ಸಹ.
ReplyDelete