May 15, 2011

ಶ್ರೀ ಶಂಕರ ವಸಂತ ವೇದಪಾಠ ಶಿಬಿರ ಸಮಾರೋಪ...


ವೇದ ಮೂರ್ತಿ ಶ್ರೀ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳ ನೇತೃತ್ವದಲ್ಲಿ ಕಳೆದ ಎಪ್ರಿಲ್ ತಿಂಗಳಿನಲ್ಲಿ ಆರಂಭವಾದ ಶ್ರೀ ಶಂಕರ ವಸಂತವೇದ ಪಾಠ ಶಿಬಿರದ ಸಮಾರೋಪ ಕಾರ್ಯಕ್ರಮ ನಿನ್ನೆ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ಮುಜುಂಗಾವು ಶ್ರೀ ಕ್ಷೇತ್ರದ ಆಡಳಿತ ಕಾರ್ಯದರ್ಶಿ ಎಂ.ಸುಬ್ರಾಯ ಭಟ್, ಕಾನ-ಮೂಡಕರೆ ಇವರು ವಿಶ್ವೇಶ್ವರ ಶಾಸ್ತ್ರಿಗಳನ್ನು ಗೌರವಿಸಿದರು. ಸಂಸ್ಕೃತ ತರಗತಿಗಳನ್ನು ನಡೆಸಿಕೊಟ್ಟ ಮಂಜೇಶ್ವರ ಶ್ರೀಅನಂತೇಶ್ವರ ದೇವಳದ ಪ್ರೌಢಶಾಲಾ ವಿಭಾಗದ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಇವರನ್ನು ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಸನ್ಮಾನಿಸಿದರು. ಶ್ರೀಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.