Oct 29, 2011

ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’



“ಮುಜುಂಗಾವಿನ ಪ್ರಶಾಂತ ಪರಿಸರ, ದೇವಾಲಯದ ಸನಿಹದಲ್ಲಿ ವಿದ್ಯಾರ್ಜನೆ ಮಾಡುವುದು ಒಂದು ಸುಯೋಗ. ಆಧುನಿಕತೆಯ ಕಡೆಗೆ ಪೂರ್ತಿಯಾಗಿ ಮುಖ ಮಾಡದೆ ಇನ್ನೂ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದ ವಿದ್ಯಾಭ್ಯಾಸ ನೀಡುತ್ತಿರುವ ಶ್ರೀ ಭಾರತೀ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ದಾರಿಯನ್ನು ನಿರಂತರವಾಗಿ ತೋರುತ್ತಿದೆ. ಇದು ವಿದ್ಯಾರ್ಥಿಗಳ ಬಹುಮುಖಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ." ಎಂದು ಸಾಹಿತಿ ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಕ್ಟೋಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಜೀವಿತ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಸುಪ್ರೀತಾ ಸ್ವಾಗತಿಸಿ, ದೀಪಕ್ ಶ್ರೀವತ್ಸ ವಂದಿಸಿದರು. ಕಾರ್ತಿಕ್. ಎಸ್ ಮತ್ತು ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Oct 10, 2011

ಶ್ರೀ ಶಾರದಾ ಪೂಜೆ

ಮೊನ್ನೆ ೦೬.೧೦.೨೦೧೧ ಗುರುವಾರ ವಿಜಯ ದಶಮಿಯ ದಿನ ನಮ್ಮ ವಿದ್ಯಾಪೀಠದಲ್ಲಿ ವೇದಮೂರ್ತಿ ಶ್ರೀ ಮಹಾದೇವ ಭಟ್ಟ ಕೋಣಮ್ಮೆ ಇವರು ಶ್ರೀ ಶಾರದಾ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸವನ್ನೂ ಅವರು ನೆರವೇರಿಸಿಕೊಟ್ಟರು.

Oct 3, 2011

ಪೊಸಡಿ ಗುಂಪೆ ಬೆಟ್ಟ ನೋಡು...




ನಿನ್ನೆ ಗಾಂಧಿ ಜಯಂತಿ ರಜೆ. ರಜಾ ದಿನವಾದ್ದರಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಉನ್ನತ ಶಿಖರಗಳಲ್ಲಿ ಒಂದಾದ ಪೊಸಡಿ ಗುಂಪೆಗೆ ಚಾರಣವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಚಾರಣದ ವಿಶಿಷ್ಟ ಅನುಭೂತಿಯನ್ನು ಪೊಸಡಿ ಗುಂಪೆ ನೀಡಿತು. 8,9,10 ತರಗತಿಯ ವಿದ್ಯಾರ್ಥಿಗಳು ಗುಡ್ಡ ತುದಿಯಲ್ಲಿರುವ ಅಕ್ಕ ತಂಗಿಯರ ಬಾವಿ, ಅಕ್ಕ ತಂಗಿಯರ ಹೂಗಳನ್ನು ವೀಕ್ಷಿಸಿದರು. ಶ್ರೀರಾಮಚಂದ್ರಾಪುರ ಮಠದ ಉದ್ದೇಶಿತ ಶ್ರೀ ಶಂಕರ ಧ್ಯಾನ ಮಂದಿರ ನಿರ್ಮಾಣದ ಉದ್ದೇಶಿತ ಸ್ಥಳವನ್ನು ನೋಡಿ, ಸೂರ್ಯಾಸ್ತದ ಸೊಬಗನ್ನು ನೋಡುತ್ತಾ ಮರಳಿ ಮನೆಯ ದಾರಿ ಹಿಡಿದರು.

Oct 1, 2011

ಪ್ರತಿಭಾ ಭಾರತೀ - ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ



29.09.2011 ಗುರುವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ಸೆಪ್ಟೆಂಬರ್ ತಿಂಗಳ ಪ್ರತಿಭಾ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಬಿ.ರಾವ್ ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿನಿ ಶ್ವೇತಾ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸುಹಾಸ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವೈಶಾಲಿ ಮತ್ತು ಕವಿತಾ ಕಾರ್ಯಕ್ರಮ ನಿರೂಪಿಸಿದರು. ಗೌರೀಶ ವಿಶ್ವಾಮಿತ್ರ ಧನ್ಯವಾದ ಸಮರ್ಪಿಸಿದರು.

ನಮನಗಳು ನಿಮಗೆ...

ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳಲ್ಲಿ ಹತ್ತು ದಿನಗಳ ವಿಶೇಷ ಇಂಗ್ಲೀಷ್ ತರಬೇತಿ ಶಿಬಿರ ನಡೆಸಿಕೊಟ್ಟ ಚಂದ್ರಪ್ರಭಾ ಬಿ.ರಾವ್ ಮತ್ತು ಮಲಯಾಳ ಭಾಷಾ ತರಬೇತಿ ಶಿಬಿರವನ್ನು ನಡೆಸಿಕೊಟ್ಟ ಕೆ.ವೆಂಕಟ್ರಮಣ ಭಟ್ ಅವರನ್ನು ಶ್ರೀ ಬಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ೩೦.೦೯.೨೦೧೧ ಶುಕ್ರವಾರದಂದು ಸನ್ಮಾನಿಸಿದರು.