ನಿನ್ನೆ ಗಾಂಧಿ ಜಯಂತಿ ರಜೆ. ರಜಾ ದಿನವಾದ್ದರಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಉನ್ನತ ಶಿಖರಗಳಲ್ಲಿ ಒಂದಾದ ಪೊಸಡಿ ಗುಂಪೆಗೆ ಚಾರಣವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಚಾರಣದ ವಿಶಿಷ್ಟ ಅನುಭೂತಿಯನ್ನು ಪೊಸಡಿ ಗುಂಪೆ ನೀಡಿತು. 8,9,10 ತರಗತಿಯ ವಿದ್ಯಾರ್ಥಿಗಳು ಗುಡ್ಡ ತುದಿಯಲ್ಲಿರುವ ಅಕ್ಕ ತಂಗಿಯರ ಬಾವಿ, ಅಕ್ಕ ತಂಗಿಯರ ಹೂಗಳನ್ನು ವೀಕ್ಷಿಸಿದರು. ಶ್ರೀರಾಮಚಂದ್ರಾಪುರ ಮಠದ ಉದ್ದೇಶಿತ ಶ್ರೀ ಶಂಕರ ಧ್ಯಾನ ಮಂದಿರ ನಿರ್ಮಾಣದ ಉದ್ದೇಶಿತ ಸ್ಥಳವನ್ನು ನೋಡಿ, ಸೂರ್ಯಾಸ್ತದ ಸೊಬಗನ್ನು ನೋಡುತ್ತಾ ಮರಳಿ ಮನೆಯ ದಾರಿ ಹಿಡಿದರು.
Oct 3, 2011
ಪೊಸಡಿ ಗುಂಪೆ ಬೆಟ್ಟ ನೋಡು...
ನಿನ್ನೆ ಗಾಂಧಿ ಜಯಂತಿ ರಜೆ. ರಜಾ ದಿನವಾದ್ದರಿಂದ ನಮ್ಮ ಶಾಲಾ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯ ಉನ್ನತ ಶಿಖರಗಳಲ್ಲಿ ಒಂದಾದ ಪೊಸಡಿ ಗುಂಪೆಗೆ ಚಾರಣವನ್ನು ಮಾಡಿದರು. ವಿದ್ಯಾರ್ಥಿಗಳಿಗೆ ಚಾರಣದ ವಿಶಿಷ್ಟ ಅನುಭೂತಿಯನ್ನು ಪೊಸಡಿ ಗುಂಪೆ ನೀಡಿತು. 8,9,10 ತರಗತಿಯ ವಿದ್ಯಾರ್ಥಿಗಳು ಗುಡ್ಡ ತುದಿಯಲ್ಲಿರುವ ಅಕ್ಕ ತಂಗಿಯರ ಬಾವಿ, ಅಕ್ಕ ತಂಗಿಯರ ಹೂಗಳನ್ನು ವೀಕ್ಷಿಸಿದರು. ಶ್ರೀರಾಮಚಂದ್ರಾಪುರ ಮಠದ ಉದ್ದೇಶಿತ ಶ್ರೀ ಶಂಕರ ಧ್ಯಾನ ಮಂದಿರ ನಿರ್ಮಾಣದ ಉದ್ದೇಶಿತ ಸ್ಥಳವನ್ನು ನೋಡಿ, ಸೂರ್ಯಾಸ್ತದ ಸೊಬಗನ್ನು ನೋಡುತ್ತಾ ಮರಳಿ ಮನೆಯ ದಾರಿ ಹಿಡಿದರು.
Subscribe to:
Post Comments (Atom)
No comments:
Post a Comment