Oct 27, 2013

ಚಿನ್ಮಯದಲ್ಲಿ ಭಗವದ್ಗೀತೆ - 2013



ಕಾಸರಗೋಡು ಚಿನ್ಮಯಾ ವಿದ್ಯಾಲಯದಲ್ಲಿ ನಡೆದ ಭಗವದ್ಗೀತಾ-2013 ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಕೃಷ್ಣಶೌರಿ.ಡಿ.ಎಸ್, ಮನೀಶ, ಅರುಣಶಂಕರ, ಚಿನ್ಮಯಿ ಬಹುಮಾನ ಗಳಿಸಿದರು.

ಶಾರದಾ ಪೂಜಾ - 2013



ನಮ್ಮ ವಿದ್ಯಾಪೀಠದಲ್ಲಿ 14.10.2013ರಂದು ಜರಗಿದ ವಿಜಯದಶಮಿ ಕಾರ್ಯಕ್ರಮದಲ್ಲಿ ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಶಾರದಾ ಪೂಜೆ ನೆರವೇರಿಸಿದರು.

Oct 10, 2013

ಬ್ಯಾಂಕಿಂಗ್ ಮಾಹಿತಿ ಶಿಬಿರ

   “ಜೀವನದ ಭದ್ರತೆಗೆ ಬ್ಯಾಂಕಿಂಗ್ ಅಗತ್ಯ. ಹಾಗಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಉಳಿತಾಯದ ಮಹತ್ವವನ್ನು ಮನಗ೦ಡು ಅಭ್ಯಾಸ ಮಾಡಿಕೊಳ್ಳಬೇಕು. ನಾಳೆಗಾಗಿ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳಲು ಮತ್ತು ಅಗತ್ಯಗಳಿಗಾಗಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಬ್ಯಾಂಕಿಂಗ್ ಉತ್ತಮ ವ್ಯವಸ್ಥೆಯಾಗಿದೆ  ಎಂದು ನಬಾರ್ಡ್ ಸಂಸ್ಥೆಯ ಫಿನಾನ್ಶಿಯಲ್ ಲಿಟರಸಿ ಏಜೆನ್ಸಿಯ ಜಗನ್ನಾಥ ಶೆಟ್ಟಿ ಕುಂಬಳೆ ಅಭಿಪ್ರಾಯಪಟ್ಟರು. ಅವರು ನಿನ್ನೆ 09.10.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ಬ್ಯಾಂಕಿಂಗ್ ಮಾಹಿತಿ ಶಿಬಿರದಲ್ಲ್ಲಿ ಮಾತನಾಡುತ್ತಿದ್ದರು.
        ಶಾಲಾ ಸಮಿತಿಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸ್ಮಿತಾ ಆಳ್ವ ಸ್ವಾಗತಿಸಿ ವಂದಿಸಿದರು.

Oct 3, 2013

ಸೇವನಾ ದಿನ 2013

02.10.2013 ಬುಧವಾರ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸೇವನಾ ದಿನದ ಅಂಗವಾಗಿ ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು.