Jul 7, 2012

ಶಾಲಾ ಚುನಾವಣೆ

ಶಾಲಾ ಚುನಾವಣೆ ಕಳೆದಿದೆ. ವಿದ್ಯಾರ್ಥಿ ನಾಯಕ ಸ್ಥಾನಕ್ಕೆ 6 ಮಂದಿ ಮತ್ತು ಉಪನಾಯಕ ಸ್ಥಾನಕ್ಕೆ ನಡೆದ ಸ್ಪರ್ಧೆಗೆ 7 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಒಡ್ಡಿದ್ದರು. ಫಲಿತಾಂಶದಲ್ಲಿ ಅತ್ಯಧಿಕ ಮತ ಪಡೆದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಶಾಲಿ. ಎಂ ವಿದ್ಯಾರ್ಥಿ ನಾಯಕಿಯಾಗಿಯೂ, ವಿದ್ಯಾರ್ಥಿ ಉಪನಾಯಕನಾಗಿ ಕುಮಾರ ಸುಬ್ರಹ್ಮಣ್ಯನೂ ಆಯ್ಕೆಯಾಗಿದ್ದಾರೆ. ಈ ವರ್ಷದ ಶಾಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದಕ್ಕೊಯ್ಯಲು ಅವರ ಜೊತೆ ವಿದ್ಯಾರ್ಥಿಗಳ ಮಂತ್ರಿ ಮಂಡಲವೂ ಕಾರ್ಯ ನಿರ್ವಹಿಸಲಿದೆ. ಅವರಿಗೆ ಶುಭಾಶಯಗಳು.

Jul 6, 2012

ಪ್ರತಿಭಾ ಭಾರತೀ

“ಮುಜುಂಗಾವು ವಿದ್ಯಾಪೀಠದ ವಿದ್ಯಾರ್ಥಿಗಳ ಶಿಸ್ತು ಇತರರಿಗೆ ಮಾದರಿ. ಉತ್ತಮ ಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿರುವುದರ ಅಭಿವ್ಯಕ್ತಿ ಅದು. ವಿದ್ಯಾರ್ಥಿಗಳಿಗೆ ಇಲ್ಲಿ ದೊರೆಯುವ ಉತ್ತಮ ಶಿಕ್ಷಣ ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ" ಎಂದು ಕೇಂದ್ರ ಮಹಿಳಾ ಪರಿಷತ್ತು ಸಂಚಾಲಕಿ ಈಶ್ವರಿ ಎಸ್. ಬೇರ್ಕಡವು ಅಭಿಪ್ರಾಯಪಟ್ಟರು. ಅವರು ನಮ್ಮ ವಿದ್ಯಾಪೀಠದಲ್ಲಿ ೦೪.೦೭.೨೦೧೨ ಬುಧವಾರ ಜರಗಿದ ಹೊಸ ಅಧ್ಯಯನ ವರ್ಷದ ಪ್ರಥಮ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ದೀಪಕ್ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಕವಿತಾ ಸ್ವಾಗತಿಸಿ, ವೈಶಾಲಿ ವಂದಿಸಿದರು. ಶ್ವೇತಾ ಮತ್ತು ನವನೀತ ಕಾರ್ಯಕ್ರಮ ನಿರೂಪಿಸಿದರು.

ಗುರುಪೂರ್ಣಿಮಾ

03.07.2012 ಮಂಗಳವಾರದಂದು ಜರಗಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮಭಟ್ ದರ್ಭೆಮಾರ್ಗ ವಿದ್ಯಾರ್ಥಿಗಳಿಗೆ ವ್ಯಾಸಪೂರ್ಣಿಮೆಯ ವಿಶೇಷ ಮಹತ್ವಗಳ ಕುರಿತು ಉಪನ್ಯಾಸ ನೀಡಿದರು. ಎಡನಾಡು ವಲಯ ಗುರಿಕಾರ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಮತ್ತು ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು.