Jun 2, 2010

ಶಾಲಾ ಪ್ರವೇಶೋತ್ಸವ


ನಮ್ಮ ಶಾಲಾ ಪ್ರವೇಶೋತ್ಸವವನ್ನು ೦೧.೦೬.೨೦೧೦ ಮಂಗಳವಾರದಂದು ಪುತ್ತಿಗೆ ಗ್ರಾಮ ಪಂಚಾಯತು ಉಪಾಧ್ಯಕ್ಷ ಜಯಂತ ಪಾಟಾಳಿ ಉದ್ಘಾಟಿಸಿದರು. ಆಡಳಿತ ಮಂಡಳಿಯ ಮುಖ್ಯಸ್ಥ ಡಾ|ಡಿ.ಪಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಧರ್ಮತ್ತಡ್ಕ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಉಳುವಾನ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಶಾಲಾ ಮುಖ್ಯೋಪಾಧ್ಯಾಯ ಎಮ್.ಶ್ಯಾಮ ಭಟ್, ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ವೈಶಾಲಿ ಸ್ವಾಗತಿಸಿ ಅನೂಷಾ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

ಗುರುನಮನ

ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ನಮ್ಮ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಬೇಸಿಗೆ ತರಬೇತಿ ನೀಡಿದ್ದಾರೆ. ೨೫.೦೫.೨೦೧೦ ರಂದು ತರಬೇತಿ ಶಿಬಿರದ ಕೊನೆಯ ದಿನದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಮೇಡಂಗೆ ಗೌರವ ಸಲ್ಲಿಸಿದ್ದೇವೆ. ಈ ಸಂದರ್ಭದಲ್ಲಿ ಕಥೆಗಾರ್ತಿ ಕೃಷ್ಣವೇಣಿ ಕಿದೂರು, ಲಕ್ಷ್ಮಿ. ವಿ. ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ.ಕೆ ಉಪಸ್ಥಿತರಿದ್ದರು. ಸೀರೆ ಹೊದೆಸಿ ನಮ್ಮೆಲ್ಲರ ಪರವಾಗಿ ಗೌರವಿಸಿದವರು ಶಾಲಾ ಮುಖ್ಯೋಪಾಧ್ಯಾಯ ಎಂ. ಶ್ಯಾಮ ಭಟ್, ದರ್ಬೆ ಮಾರ್ಗ.

ಆಂಗ್ಲ ಭಾಷಾ ತರಬೇತಿ ಆರಂಭ

ಶ್ರೀ ಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿದ್ದ ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ಪ್ರಸ್ತುತ ಮುಂಬೈ ನಿವಾಸಿಯಾಗಿದ್ದಾರೆ. ನಮ್ಮ ವಿದ್ಯಾರ್ಥಿಗಳ ಮೇಲಿನ ಪ್ರೀತಿಯಿಂದ ಬೇಸಿಗೆ ರಜಾಕಾಲದಲ್ಲಿ ನಮ್ಮ ಸಂಸ್ಥೆಗೆ ಬಂದು ವಿದ್ಯಾರ್ಥಿಗಳಿಗೆ ವಿಶೇಷ ಆಂಗ್ಲಭಾಷಾ ತರಬೇತಿ ನಡೆಸಿಕೊಟ್ಟಿದ್ದಾರೆ. ಇದು ಶಿಬಿರದ ಉದ್ಘಾಟನೆಯ ನೋಟ. ಈ ಸಂದರ್ಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ. ಕೆ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್.ಎಂ, ದರ್ಬೆ ಮಾರ್ಗ ಉಪಸ್ಥಿತರಿದ್ದರು.