Sep 26, 2011

ಚಿನ್ಮಯ ವಿದ್ಯಾಲಯದಲ್ಲಿ ಭಗವದ್ಗೀತೆ

ಸೆಪ್ಟೆಂಬರ್ ೨೧ರಂದು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ಭಗವದ್ಗೀತಾ ಕಂಠಪಾಠ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಇಂದಿರಾ. ಯಂ, ಕಿರಣ್ ಮಹೇಶ್, ಚೈತ್ರಾ, ಮನೀಶ್, ಕೃಷ್ಣ ಶೌರಿ. ಡಿ.ಎಸ್, ಚಿನ್ಮಯಿ. ಎಂ, ಗೌರೀಶ ವಿಶ್ವಾಮಿತ್ರ ಮತ್ತು ಅರುಣ ಶಂಕರ ಪ್ರತ್ಯೇಕ ವಿಭಾಗಗಳಲ್ಲಿ ಭಾಗಹಿಸಿದ್ದರು. ಆಯ್ದ ಕೆಲವೇ ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ಪ್ರೋತ್ಸಾಹಕ ಬಹುಮಾನ ನಮ್ಮ ವಿದ್ಯಾಪೀಠದ ಇಂದಿರಾ. ಎಂ, ಕಿರಣ್ ಮಹೇಶ್, ಕೃಷ್ಣ ಶೌರಿ. ಡಿ.ಎಸ್ ಮತ್ತು ಚಿನ್ಮಯಿ. ಎಂ ಇವರಿಗೆ ದೊರೆತಿದೆ. ಎಲ್ಲರಿಗೂ ಶುಭಾಶಯಗಳು...

ನಮ್ಮ ಬೆಂಗಳೂರು ಪ್ರಯಾಣ...




 ಈ ತಿಂಗಳ ಆರಂಭದಲ್ಲಿ ದೊರೆತ ಓಣಂ ರಜಾ ದಿನಗಳನ್ನು ನಮ್ಮ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಬೆಂಗಳೂರು ವಿಹಾರದಲ್ಲಿ ಕಳೆದರು. ಹೊಸ ಅನುಭವಗಳನ್ನು ಆ ಮೂಲಕ ಪಡೆದುಕೊಂಡರು. ವಿಧಾನಸೌಧದ ಒಳಗಿನ ದೃಶ್ಯಗಳನ್ನೂ ವೀಕ್ಷಿಸಲು ದೊರೆತದ್ದು ನಮ್ಮ ವಿದ್ಯಾರ್ಥಿಗಳ ಸಂತೋಷಕ್ಕೆ ಮುಕುಟಪ್ರಾಯವಾಗಿತ್ತು. ಇನ್ನಷ್ಟು ದೃಶ್ಯಗಳು ನಿಮಗಾಗಿ...

ಮನಸೆಳೆದ ಓಣಂ ಹೂರಂಗವಲ್ಲಿಗಳು...

ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳು ಬಿಡಿಸಿದ ಹೂರಂಗವಲ್ಲಿಯ ವೈವಿಧ್ಯಗಳು...