Dec 10, 2012

ಕ್ರೀಡೋತ್ಸವ 2012

ನಮ್ಮ ವಿದ್ಯಾಪೀಠದಲ್ಲಿ ಮೊನ್ನೆ 08.12.2012 ಶನಿವಾರ ಜರಗಿದ ‘ಕ್ರೀಡೋತ್ಸವ’ವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ್ ಕುಂಚಿನಡ್ಕ ಧ್ವಜಾರೋಹಣಗೈದು ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಪೂರ್ವ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಬೆಳಗ್ಗೆ 10 ಗಂಟೆಗೆ ಧ್ವಜವಂದನೆಯೊಂದಿಗೆ ಆರಂಭವಾದ ಸ್ಪರ್ಧೆಗಳು ಸಾಯಂಕಾಲ 4 ಗಂಟೆಯ ತನಕ ಜರಗಿದವು.

Dec 4, 2012

ಎಸ್.ಆರ್. ಪಾಟೀಲ್ ಭೇಟಿ

ಕರ್ನಾಟಕ ರಾಜ್ಯ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಇವರು ೦೧.೧೨.೨೦೧೨ ಶನಿವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವನ್ನು ಸಂದರ್ಶಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ-ಮಾರ್ಗ ಇವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ನಂತರ ಅವರು ಶಾಲಾ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಜರಗಿದ ‘ಜಾನಪದ ಸಂಧ್ಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿ

24.11.2012 ಮತ್ತು 25.11.2012 ರಂದು ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಜರಗಿದ ಅಂತರ್ ಜಿಲ್ಲಾ ಡೋಜೋ -ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಆಶ್ರಿತ್ ನಾರಾಯಣ. ಕೆ, ಯಜ್ಞೇಶ, ವೈಶಾಕ್. ಎಸ್, ಮನೀಶ್.ಎ, ಆದಿತ್ಯ ಶರವಣ. ಎಚ್, ಪ್ರಶಾಂತ. ಎಂ, ಅನ್ವಿತ್ ಶರ್ಮ. ಎಚ್, ಸುಧನ್ವ ಶಂಕರ. ಎಂ, ಕಾರ್ತಿಕ್. ಎಸ್, ದೀಪಕ್ ಶ್ರೀವತ್ಸ. ಎಂ, ಸಂಕೇತ.ಎಂ, ಶ್ವೇತಾ. ಎಸ್, ಕಿರಣ್ ಮಹೇಶ. ಎಸ್, ನಿಕ್ಷಿತ್ ಎಸ್.ಶೆಟ್ಟಿ, ಸಚಿನ್.ಎ.ಎಸ್ ಪ್ರಶಸ್ತಿ ಗಳಿಸಿದ್ದಾರೆ.