Dec 12, 2011

ಶಾಲಾ ಕ್ರೀಡಾಕೂಟ


ನಮ್ಮ ವಿದ್ಯಾಪೀಠ ವಿದ್ಯಾರ್ಥಿಗಳ ಶಾಲಾ ಕ್ರೀಡಾಕೂಟ ಕಳೆದ ಗುರುವಾರ ೦೮.೧೨.೨೦೧೧ ರಂದು ಜರಗಿತು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ರಸಾದ ಕುಂಚಿನಡ್ಕ ಧ್ವಜವಂದನೆ ಸ್ವೀಕರಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ಉಪಸ್ಥಿತರಿದ್ದರು.

Dec 6, 2011

ಜ್ಞಾನ ಭಾರತೀ

ಕಳೆದ ವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಜ್ಞಾನ ಭಾರತೀ ಕಾರ್ಯಕ್ರಮದಲ್ಲಿ ನಿವೃತ್ತ ಜೈಲು ಸೂಪರಿಟೆಂಡೆಂಟ್ ಡಿ.ಪಿ.ಪರಮೇಶ್ವರ ಹೆಬ್ಬಾರ್ ಕುದ್ರೆಪ್ಪಾಡಿ ವಿದ್ಯಾರ್ಥಿಗಳಿಗೆ ‘ಹಿರಿಯರೊಂದಿಗೆ ಮಾತುಕತೆ’ಯ ಅನುಭವವನ್ನು ಕಟ್ಟಿಕೊಟ್ಟರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಬೆ-ಮಾರ್ಗ ಉಪಸ್ಥಿತರಿದ್ದರು.