Oct 26, 2010

ಆರನೇ ತರಗತಿಯ ನಿಶಿತಾ

ಕಳೆದ ವರ್ಷ ನಿಶಿತಾ ಬಿಡಿಸಿದ ಚಿತ್ರ ಇದು. ಪುಟಾಣಿಗಳ ಕಲ್ಪನೆ ಕ್ಯಾನ್ವಾಸ್ ಮೇಲೆ ಹೇಗೆ ಮುದ್ದು ಮುದ್ದಾಗಿ ರೂಪುಗೊಳ್ಳುತ್ತದೆಯಲ್ಲವೇ...

Oct 20, 2010

ವಿದ್ಯಾ ದಶಮಿ

 
ನಮ್ಮ ಶಾಲೆಯ ವಿದ್ಯಾ ದಶಮಿ ಕಾರ್ಯಕ್ರಮ ಮೊನ್ನೆ ೧೭.೧೦.೨೦೧೦ ರಂದು ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅವರು ಪುಟಾಣಿಗಳಿಗೆ ‘ಹರಿಶ್ರೀ’ ಬರೆದು ಅಕ್ಷರಾಭ್ಯಾಸ ಮಾಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಡಿ.ಪಿ.ಭಟ್, ಅನಂತಕೃಷ್ಣ ಭಟ್ ಹಿಳ್ಳೆಮನೆ, ಶ್ಯಾಮರಾಜ್ ದೊಡ್ಡಮಾಣಿ, ವೇಣುಗೋಪಾಲ ಆರೋಳಿ ಉಪಸ್ಥಿತರಿದ್ದರು.

Oct 7, 2010

ಚಿತ್ರ - ವೈಶಾಖ್

ನಾಲ್ಕನೇ ತರಗತಿಯ ವೈಶಾಖ್ ಬಿಡಿಸಿದ ಚಿತ್ರ ಇದು. ಎಲ್ಲೋ ಕಂಡ ಚಿತ್ರಗಳನ್ನು ಮತ್ತೆ ಎಷ್ಟು ಸುಂದರವಾಗಿ ಬಿಡಿಸುವ ಪ್ರತಿಭೆ ಇದೆ ಪುಟಾಣಿಗಳಲ್ಲಿ ಅಲ್ಲವೇ...