Nov 20, 2014

‘ಪ್ರತಿಭಾ ಭಾರತೀ - ನವೆಂಬರ್’



“ಪ್ರತಿಭಾ ಭಾರತೀ ಉತ್ತಮವಾಗಿ ಮೂಡಿ ಬರುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ತುಡಿತವನ್ನು ಹೊಂದಿರಬೇಕು. ಜನ್ಮಜಾತವಾದ ಪ್ರತಿಭೆಯನ್ನು ಇಂತಹ ವೇದಿಕೆಗಳಲ್ಲಿ ಬೆಳಗಿಸಬೇಕು. ಉತ್ತಮ ಪ್ರತಿಭೆಗಳನ್ನು ಬೆಳೆಸಿಕೊಂಡಾಗ ಕೆಟ್ಟ ಹವ್ಯಾಸಗಳು ದೂರವಾಗುತ್ತವೆ. ಆದ್ದರಿಂದ ಎಳವೆಯಲ್ಲಿಯೇ ಪ್ರತಿಭೆ ಮತ್ತು ಮಾನವೀಯ ಮೌಲ್ಯಗಳನ್ನು ವಿಕಾಸಗೊಳಿಸಿಕೊಳ್ಳಬೇಕು” ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಚ್. ರಾಮ ಭಟ್ ಕಾರಿಂಜ ಹಳೆಮನೆ ಅಭಿಪ್ರಾಯಪಟ್ಟರು. ಅವರು ನಿನ್ನೆ 19.11.2014 ಬುಧವಾರ ನಮ್ಮ ವಿದ್ಯಾಪೀಠದಲ್ಲಿ ನಡೆದ ತಿಂಗಳ ’ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಲಕ್ಷ್ಮಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಜಾ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಅನನ್ಯ ಸ್ವಾಗತಿಸಿ ರಜಿತ್ ವಂದಿಸಿದರು. ಕೌಶಿಕ್ ಸಿ.ಆರ್ ಮತ್ತು ಆದಿತ್ಯ ಕಾರ್ಯಕ್ರಮ ನಿರೂಪಿಸಿದರು.

Nov 18, 2014

ಬೆಂಗಳೂರಿನಲ್ಲಿ ವಿವಿಧ ಬಹುಮಾನಗಳು


ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ತೀಕ್ಷಾ, ಕೃಷ್ಣ ಶೌರಿ, ಶ್ರೀಶ, ಆಶ್ರಿತ್ ನಾರಾಯಣ, ಅನನ್ಯ ಮತ್ತು ಸಂಯುಕ್ತ ದಿನಾಂಕ 15.11.2014 ಶನಿವಾರ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಭಾರತೀ ವಿದ್ಯಾಲಯದಲ್ಲಿ ಜರಗಿದ ಧರ್ಮಚಕ್ರ ಸಂಸ್ಥೆಯ ಅಧೀನದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದರು. ಬಹುಮಾನ ವಿಜೇತರಿಗೆ ಶುಭಾಶಯಗಳು...

Nov 13, 2014

ಪೀಠೋಪಕರಣಗಳ ಕೊಡುಗೆ


ನಮ್ಮ ವಿದ್ಯಾಪೀಠಕ್ಕೆ ನಿನ್ನೆ, ಶ್ರೀ ಮುನ್ನಿಪ್ಪಾಡಿ ಶಂಕರನಾರಾಯಣ ರಾವ್ ಅವರು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

Nov 5, 2014

ಜಾದೂ ಪ್ರದರ್ಶನ

                ಜಾದೂಗಾರ ಪಾಂಗಾಳ ಗೋಪಾಲಕೃಷ್ಣ ಶೆಣೈ ಉಡುಪಿ ಇವರಿಂದ ನಮ್ಮ ವಿದ್ಯಾಪೀಠದಲ್ಲಿ 24.10.2014 ಶುಕ್ರವಾರ ಜಾದೂ ಪ್ರದರ್ಶನ ನಡೆಯಿತು. ಸುಮಾರು 2 ಗಂಟೆಗಳ ಕಾಲ ಜರಗಿದ ಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿದ ಜಾದೂಗಳನ್ನು ಪ್ರದರ್ಶಿಸಲಾಯಿತು. ದೇವಿಪ್ರಸಾದ ಶೆಟ್ಟಿ ಸ್ವಾಗತಿಸಿ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆಮಾರ್ಗ ಧನ್ಯವಾದ ಸಮರ್ಪಿಸಿದರು.