Sep 22, 2012

ಚಿನ್ಮಯಾ ವಿದ್ಯಾಲಯದಲ್ಲಿ ನಮಗೆ ಬಹುಮಾನ

ಕಾಸರಗೋಡು ಚಿನ್ಮಯಾ ವಿದ್ಯಾಲಯವು ಶ್ರೀ ಕೃಷ್ಣ ಜಯಂತಿ ಉತ್ಸವದ ಅಂಗವಾಗಿ 21.09.2012 ಶುಕ್ರವಾರ ಆಯೋಜಿಸಿದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಚಿನ್ಮಯಿ.ಎಂ, ಭೂಮಿಕಾ, ಕೃಷ್ಣಶೌರಿ. ಡಿ.ಎಸ್, ಶ್ರೀಶ, ಮನೀಷ.ಎ, ಚೈತ್ರಾ. ಎ.ಪಿ, ಗೌರೀಶ ವಿಶ್ವಾಮಿತ್ರ ಹಾಗೂ ಶ್ರೀಸುಧಾ.ಎಂ ಭಾಗವಹಿಸಿದರು. ಚಿನ್ಮಯಾ ವಿದ್ಯಾಲಯವು ನಡೆಸುವ ಸ್ಪರ್ಧೆಗಳಲ್ಲಿ ಗೀತಾ ಕಂಠಪಾಠ ಗಾಯನಕ್ಕೆ ಒಂದು ಪ್ರತ್ಯೇಕ ಶೈಲಿ ಇದೆ. ಆ ಶೈಲಿಯನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳು ಈ ಬಾರಿ ಭಾಗವಹಿಸಿದ್ದರಿಂದ ಪ್ರುಢಶಾಲಾ ವಿಭಾಗದಲ್ಲಿ ಗೌರೀಶ ವಿಶ್ವಾಮಿತ್ರ ಪ್ರಥಮ ಹಾಗೂ ಶ್ರೀಸುಧಾ.ಎಂ ತೃತೀಯ ಬಹುಮಾನ ಪಡೆದಿದ್ದಾರೆ.