Apr 15, 2010

ವಿಷು ಹಬ್ಬದ ಶುಭಾಶಯಗಳು.

ಇದು ಸೌರಮಾನ ಯುಗಾದಿಯ ವಿಶೇಷ, ಪರಶುರಾಮನ ಸೃಷ್ಟಿಯ ನಾಡಿನಲ್ಲಿ ವಿಷು ಜನಸಾಮಾನ್ಯರ ಹಬ್ಬ. ಇಂದು ವಿಷು, ಈ ವಿಷು ನಮಗೆಲ್ಲ ಸುಖ, ಶಾಂತಿ, ನೆಮ್ಮದಿ ತರಲಿ.

Apr 11, 2010

ಕಾಮನಬಿಲ್ಲು

 - ಕವಿತಾ. ಕೆ
 ೭ನೇ ತರಗತಿ
ಬಿಲ್ಲೆ ಬಿಲ್ಲೆ
ಕಾಮನಬಿಲ್ಲೆ
ಬಿಲ್ಲೆ ಬಿಲ್ಲೆ
ಕಾಮನಬಿಲ್ಲೆ

ಅಕಾಶದ ಅಧಿಪತಿ ನೀನು
ನಮ್ಮ ಕಣ್ಣ ತೆರೆಸುವೆ ನೀನು
ಕಾಮನಬಿಲ್ಲೆ
ಕಾಮನಬಿಲ್ಲೆ

ನೇರಳೆ ನೀಲಿ ಹಸಿರು
ಕೇಸರಿ ಹಳದಿ ಕೆಂಪು
ಕಾಮನಬಿಲ್ಲೆ
ಕಾಮನಬಿಲ್ಲೆ

ಬಣ್ಣ ಬಣ್ಣದ ರಂಗನು ಚೆಲ್ಲಿ
ಮೋಡದ ಬಾಗಿಲ ತೆರೆಸುವನಲ್ಲಿ
ಕಾಮನಬಿಲ್ಲೆ
ಕಾಮನಬಿಲ್ಲೆ

Apr 4, 2010

‘ಪ್ರತಿಭಾ ಭಾರತೀ’ ವಾರ್ಷಿಕ ಸಮಾರೋಪ


“ಸನಾತನ ಸಂಸ್ಕೃತಿಗಳು ಆಧುನಿಕತೆಯ ಸ್ಪರ್ಶಕ್ಕೆ ಸಿಲುಕಿರುವ ಈ ದಿನಗಳಲ್ಲಿ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಶಾಲೆಗಳ ಅಗತ್ಯ ಬಹಳವಾಗಿದೆ. ಮುಜುಂಗಾವಿನ ಪುಣ್ಯಭೂಮಿಯಲ್ಲಿ ತಲೆಯೆತ್ತಿ ವಿದ್ಯಾದಾನದ ಮಹತ್ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಥೋಮಸ್ ಡಿ’ ಸೋಜ ಹೇಳಿದರು. ಅವರು ೩೧.೦೩.೨೦೧೦ ಬುಧವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಸ್ಥೆ ‘ಪ್ರತಿಭಾ ಭಾರತೀ’ಯ ವಾರ್ಷಿಕ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಶಾಲಾ ವಿದ್ಯಾರ್ಥಿನಿ ಇಂದಿರಾ.ಎಂ ಅಧ್ಯಕ್ಷತೆ ವಹಿಸಿದ್ದಳು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವಿತಾ.ಕೆ ವರದಿ ವಾಚಿಸಿದರು.

ವಿದ್ಯಾರ್ಥಿನಿ ಅಶ್ವತಿ ಸ್ವಾಗತಿಸಿ ಅನುಷಾ ವಂದಿಸಿದರು. ಅರ್ಪಿತಾ ಮತ್ತು ವೈಶಾಲಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಅಧ್ಯಯನ ವರ್ಷದಲ್ಲಿ ನೂರು ಶೇಕಡಾ ಹಾಜರಾತಿ ಹೊಂದಿದ ೧೮ ಮಂದಿ ವಿದ್ಯಾರ್ಥಿನಿಯರಿಗೆ ಅಗ್ರೇಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು.