“ಸನಾತನ ಸಂಸ್ಕೃತಿಗಳು ಆಧುನಿಕತೆಯ ಸ್ಪರ್ಶಕ್ಕೆ ಸಿಲುಕಿರುವ ಈ ದಿನಗಳಲ್ಲಿ ನಮ್ಮ ಭಾರತೀಯ ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಶಾಲೆಗಳ ಅಗತ್ಯ ಬಹಳವಾಗಿದೆ. ಮುಜುಂಗಾವಿನ ಪುಣ್ಯಭೂಮಿಯಲ್ಲಿ ತಲೆಯೆತ್ತಿ ವಿದ್ಯಾದಾನದ ಮಹತ್ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಥೋಮಸ್ ಡಿ’ ಸೋಜ ಹೇಳಿದರು. ಅವರು ೩೧.೦೩.೨೦೧೦ ಬುಧವಾರ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಸ್ಥೆ ‘ಪ್ರತಿಭಾ ಭಾರತೀ’ಯ ವಾರ್ಷಿಕ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಶಾಲಾ ವಿದ್ಯಾರ್ಥಿನಿ ಇಂದಿರಾ.ಎಂ ಅಧ್ಯಕ್ಷತೆ ವಹಿಸಿದ್ದಳು. ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮಭಟ್ ದರ್ಭೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವಿತಾ.ಕೆ ವರದಿ ವಾಚಿಸಿದರು.
No comments:
Post a Comment