Jun 7, 2011

ವಿಶ್ವ ಪರಿಸರ ದಿನ


ಮೊನ್ನೆ ವಿಶ್ವ ಪರಿಸರ ದಿನ. ಆದರೆ ಭಾನುವಾರವಾದ್ದರಿಂದ ತಾಂತ್ರಿಕ ಕಾರಣಗಳಿಂದಾಗಿ ಆ ದಿನವೇ ಕಾರ್ಯಕ್ರಮ ಆಚರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ವಿದ್ಯಾರ್ಥಿಗಳೆಲ್ಲ ಆಸಕ್ತಿಯಿಂದ ತಂದ ವಿವಿಧ ಗಿಡಗಳನ್ನು ಪರಸ್ಪರ ಹಂಚಿ ಕಾರ್ಯಕ್ರಮವನ್ನು ಆಚರಿಸಿಕೊಂಡೆವು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಎಸ್.ಪ್ರಸಾದ್, ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶಿಕ್ಷಕಿ ಶಿವಕುಮಾರಿ ವೃಕ್ಷಾರೋಪಣಗೈದರು. ಚಿತ್ರಾ ಮಾತಾಶ್ರೀ ಮತ್ತು ಗಾಯತ್ರಿ ಮಾತಾಶ್ರೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

1 comment: