Jun 1, 2011

ಸ್ವಾಗತ ಭಾರತೀ...

ಹೊಸ ಅಧ್ಯಯನ ವರ್ಷಕ್ಕೆ ಕಾಲಿರಿಸಿದ್ದೇವೆ. ಇಂದು ಶುಭಾರಂಭ ಕುಂಬಳೆ ಗ್ರಾಮ ಪಂಚಾಯತು ಸದಸ್ಯೆ ಅಶ್ವಿನಿ ನಾಣಿತ್ಲು ಅವರಿಂದ. ಆಡಳಿತ ಮಂಡಳಿ ಅಧ್ಯಕ್ಷ ಡಾ| ಡಿ.ಪಿ.ಭಟ್ ಅಧ್ಯಕ್ಷತೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್,  ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಇವರ ಉಪಸ್ಥಿತಿ ಕಾರ್ಯಕ್ರಮದಲ್ಲಿತ್ತು.
ಕುಮಾರಿ ಸುಧಾ ಮತ್ತು ತಂಡದವರಿಂದ ಪ್ರಾರ್ಥನೆ. ಅನುಷಾ ಸ್ವಾಗತ, ಶ್ರೀವಲ್ಲಿ ವಂದನಾರ್ಪಣೆ, ಸುಪ್ರೀತಾ.ಎಂ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮದ ಔಪಚಾರಿಕ ಭಾಗ.
ಮುಂದಿನದ್ದು ಏನಿದ್ದರೂ ಹತ್ತಕ್ಕೆ ಏರುವ ಹೊತ್ತಿನ ಕಾರ್ಯಕ್ರಮಗಳು. ಈ ನಿಟ್ಟಿನಲ್ಲಿ ಶಾಲಾರಂಭವಾಗಿದೆ. ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ನಮ್ಮ ಮೊದಲ ತಂಡದ ವಿದ್ಯಾರ್ಥಿಗಳಿಗೆ ಶುಭಾಶಯಗಳು...

No comments:

Post a Comment