ನಮ್ಮ ಪುಟ್ಟ ಪ್ರಯತ್ನಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರಿಂದ ನಿನ್ನೆ ೧೬.೦೩.೨೦೧೦ ಮಂಗಳವಾರ ಅನುಗ್ರಹಪೂರ್ವಕ ಮಂತ್ರಾಕ್ಷತೆ, ಬ್ಲಾಗ್ ಲೋಕಾರ್ಪಣೆ. ನಮ್ಮ ವಿದ್ಯಾರ್ಥಿಗಳು ರೂಪಿಸಿದ ಈ ಬ್ಲಾಗನ್ನು ಶ್ರೀಮದ್ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಂಗಳವಾರ ಬೆಂಗಳೂರು ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳು ಬರೆದ ಕಥೆ, ಕವನ, ಚಿತ್ರ ಇತ್ಯಾದಿ ಸೃಜನಶೀಲ ಬರಹಗಳನ್ನು ಶಾಲಾ ವರದಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಈ ಬ್ಲಾಗ್ ಯಶಸ್ಸಿನ ಪಥದಲ್ಲಿ ನಡೆಯಲಿ ಎಂದು ಶ್ರೀ ಗುರುಗಳು ಈ ಸಂದರ್ಭದಲ್ಲಿ ಶುಭಹಾರೈಸಿದರು.
ಬ್ಲಾಗ್ ಲೋಕಾರ್ಪಣೆಯ ಈ ಸಮಾರಂಭದಲ್ಲಿ ಶ್ರೀಮಠದ ಮಾಧ್ಯಮ ವಿಭಾಗದ ರಾಧಾಕೃಷ್ಣ ಭಡ್ತಿ, ಮೋಹನ ಹೆಗಡೆ, ಶ್ರೀಮಠದ ಆಡಳಿತ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ, ಶ್ರೀಗುರುಗಳ ಆಪ್ತಕಾರ್ಯದರ್ಶಿ ಜೆಡ್ಡು ತಿರುಮಲೇಶ್ವರ ಪ್ರಸಾದ್, ಎಂ.ಎನ್.ಭಟ್ ಮದ್ಗುಣಿ, ಸಿ.ಎಚ್.ಎಸ್ ಭಟ್, ಶಾರದಾ ಜಯಗೋವಿಂದ, ಸದಾಶಿವ ಮೋಂತಿಮಾರ್ ಮತ್ತಿತರರು ಉಪಸ್ಥಿತರಿದ್ದರು.
Mar 17, 2010
Subscribe to:
Post Comments (Atom)
ಶುಭವಾಗಲಿ...ಇದು ಒಂದು ಒಳ್ಳೆಯ ಪ್ರಯತ್ನ....ಇದರ ಮೂಲಕ ಸಂಸ್ಥೆಯ ಒಳ್ಳೆಯ ವಿಚಾರಂಗೋ ಲೋಕಕ್ಕೆ ಹಬ್ಬಲಿ ಹೇಳಿ ಹಾರೈಸುತ್ತೆ.
ReplyDeleteಅನೀಶ್ ಪಿ