Aug 25, 2014

ಪರಿಸರ ಮಾಹಿತಿ ಕಾರ್ಯಕ್ರಮ - 2014

``ಕಲ್ಪವೃಕ್ಷ ಕಾಮಧೇನುಗಳು ಸಮಾಜಕ್ಕೆ ಅತ್ಯಂತ ಆವಶ್ಯಕವಾದವುಗಳು. ಇವುಗಳ ಉಳಿವು ಪರಿಸರ ಸಂರಕ್ಷಣೆಯ ದ್ಯೋತಕ. ಆತ್ಮ, ಮಹಾತ್ಮ ಮತ್ತು ಪರಮಾತ್ಮನ ಮೇಲಿನ ಭಕ್ತಿ ಪರಿಸರ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಮಾನವನಿಗೆ ಸಹಜೀವಿಗಳ ಮೇಲೆ ಪ್ರೀತಿ ಇರಬೇಕು. ಆದರೆ ಪ್ರಸ್ತುತ ನಾವು ಸೇವಿಸುವ ಆಹಾರವೇ ವಿಷಮಯವಾಗುತ್ತಿದೆ. ಉಪ್ಪು, ಮೈದಾ, ಸಕ್ಕರೆಗಳಲ್ಲಿ ಕಲಬೆರಕೆ ಕಂಡುಬರುತ್ತಿದೆ. ಮಾನವನು ಸ್ವಂತಲಾಭಕ್ಕಾಗಿ ಸಮಾಜವನ್ನೇ ಬಲಿಕೊಡುವ ಹಂತಕ್ಕೆ ತಲಪಿದ್ದಾನೆ. ನಾವು ಈ ದುರಭ್ಯಾಸದಿಂದ ವಿಮುಖರಾಗಿ ಸನ್ಮಾರ್ಗದಲ್ಲಿ ನಡೆಯಬೇಕು” ಎಂದು ನಿವೃತ್ತ ಪ್ರಾಂಶುಪಾಲ ಪಿ.ಎನ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ಅವರು ಮೊನನೆ 22.08.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ  ಜರಗಿದ ‘ಪರಿಸರ ಮಾಹಿತಿ ಕಾರ್ಯಕ್ರಮ’ದಲ್ಲಿ ಮಾತನಾಡುತ್ತಿದ್ದರು.

ಶಾಲಾ ಸಮಿತಿಯ ಜತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ಸತೀಶ್ ಮತ್ತು ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಾದ ದೀಕ್ಷಾ ಸ್ವಾಗತಿಸಿ ಪುನೀತ್ ಕುಮಾರ್ ವಂದಿಸಿದರು. ನಿಶಿತಾ. ಎನ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment