``ಧರ್ಮ
ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ
ಎಳವೆಯಲ್ಲಿಯೇ ಅರಿವು ಮೂಡಿಸಬೇಕು.
ಈ
ಹಂತದಲ್ಲಿ ನಮ್ಮ ಸಂಸ್ಕೃತಿಯ
ವೈವಿಧ್ಯದ ಬಗ್ಗೆ ತಿಳುವಳಿಕೆ
ಮೂಡಿಸುವ ಕಾರ್ಯಕ್ರಮಗಳು ಅಗತ್ಯವಾಗಿ
ಏರ್ಪಾಡಾಗಬೇಕು.
ಇಂತಹ
ಕಾರ್ಯಕ್ರಮಗಳಲ್ಲಿ ಮಕ್ಕಳು
ಧೈರ್ಯ ಮತ್ತು ನಿರ್ಭಯದಿಂದ
ಭಾಗವಹಿಸಬೇಕು."
ಎಂದು
‘ಬೆಣ್ಣೆ’ ಮಾಸ ಪತ್ರಿಕೆಯ ಗೌರವ
ಸಂಪಾದಕ ಮಧುರಕಾನನ ಗೋಪಾಲಕೃಷ್ಣ
ಭಟ್ ಅಭಿಪ್ರಾಯಪಟ್ಟರು.
ಅವರು ಇಂದು ನಮ್ಮ
ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ
ಜಯಂತಿ ಉತ್ಸವ ಮತ್ತು ರಾಮಾಯಣ
ಮಾಸಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ
ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್
ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ
ಪುರುಷೋತ್ತಮ ಭಟ್,
ಜ್ಯೋತಿಷಿ
ಎಂ.ಚಂದ್ರಶೇಖರ
ಭಟ್ ಮಡ್ವ,
ಶ್ರೀ
ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ
ಶ್ಯಾಮ ಭಟ್ ದರ್ಬೆಮಾರ್ಗ
ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ
ಶ್ರೀರಾಮ ಪಟ್ಟಾಭಿಷೇಕ ರೂಪಕ
ಜರಗಿತು.
ವಿದ್ಯಾರ್ಥಿಗಳಾದ
ಚೈತ್ರಶ್ರೀ ಎ.ಪಿ
ಸ್ವಾಗತಿಸಿ ಶ್ರೀಜಾ ಗಿರೀಶ್
ವಂದಿಸಿದರು.
ಕೌಶಿಕ್
ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment