“ಎಲ್ಲ
ಜೀವಿಗಳನ್ನು ತನ್ನಂತೆ ಕಾಣಬೇಕು.
ಎಲ್ಲ
ಜೀವಿಗಳಿಗೂ ನೋವಾಗದಂತೆ
ನೋಡಿಕೊಳ್ಳಬೇಕು.
ಮಹಿಳೆಯರನ್ನು
ಎಲ್ಲಿ ಗೌರವದಿಂದ ಕಾಣುತ್ತಾರೋ
ಅಲ್ಲಿ ದೇವತೆಗಳು ಸಾಕ್ಷಾತ್ಕರಿಸುತ್ತಾರೆ.
ಅಂತಹ
ಸುಂದರ ಭೂಮಿ ನಮ್ಮದಾಗಬೇಕು.
ಪರಿಪೂರ್ಣತೆಯ
ಸಂಕೇತವಾದ ಶ್ರಾವಣಪೂರ್ಣಿಮೆಯನ್ನು
ಈ ಹಿನ್ನೆಲೆಯಲ್ಲಿ ರಕ್ಷಾ ಬಂಧನ
ಹಬ್ಬವಾಗಿ ಆಚರಿಸುತ್ತೇವೆ.
ಎಂದು
ನಿವೃತ್ತ ಸಂಸ್ಕೃತ ಶಿಕ್ಷಕ
ಬಾಲಕೃಷ್ಣ ಶರ್ಮ ಅಭಿಪ್ರಾಯಪಟ್ಟರು.
ಅವರು
ಇಂದು ನಮ್ಮ ವಿದ್ಯಾಪೀಠದಲ್ಲಿ
ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ
ಭಾಗವಹಿಸಿ ಮಾತನಾಡುತ್ತಿದ್ದರು.
ಶಾಲಾ
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ
ಪುರುಷೋತ್ತಮ ಭಟ್ ಕುಂಬಳೆ
ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ್ದರು.
ಶಾಲಾ
ಸಮಿತಿ ಜತೆ ಕಾರ್ಯದರ್ಶಿ ಶ್ಯಾಮರಾಜ್
ದೊಡ್ಡಮಾಣಿ ಉಪಸ್ಥಿತರಿದ್ದರು.
ಶಾಲಾ
ಮುಖ್ಯೋಪಾಧ್ಯಾಯ ಶ್ಯಾಮ ಭಟ್
ದರ್ಬೆಮಾರ್ಗ ಸ್ವಾಗತಿಸಿ
ವಿದ್ಯಾರ್ಥಿನಿ ಅನನ್ಯ ವಂದಿಸಿದರು.
ವಿಕ್ರಂ
ಕಾರ್ಯಕ್ರಮ ನಿರೂಪಿಸಿದರು.
No comments:
Post a Comment