Jul 8, 2014

ಹಲಸು ಉಪನ್ಯಾಸ


               
ಹಲಸಿನ ಹಣ್ಣು ಮತ್ತು ಇದರ ಉತ್ಪನ್ನಗಳ ಮಹತ್ವವು ದಿನೇ ದಿನೇ ಆಧುನಿಕ ಸಮಾಜಕ್ಕೆ ಪರಿಚಯಿಸಲ್ಪಡುತ್ತಿದೆ. ಅನಾದಿ ಕಾಲದಿಂದಲೂ ಹಲಸು ಜನಸಾಮಾನ್ಯರ ಒಡನಾಡಿಯಾಗಿದ್ದು ಕೆಲ ಕಾಲ ಮೂಲೆಗುಂಪಾಗಿದ್ದರೂ ಮತ್ತೆ ಪ್ರಚಾರ, ಬಳಕೆಗೆ ಬಂದಿದೆ. ಇದು ಅತ್ಯುತ್ತಮ ಪೌಷ್ಟಿಕಾಂಶಯುಕ್ತ ಆಹಾರವಾಗಿದೆಎಂದು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಡಾ|ಸರಿತಾ ಹೆಗ್ಡೆ ಅಭಿಪ್ರಾಯಪಟ್ಟರು. ಅವರು 04.07.2014 ಶುಕ್ರವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಮೌಲ್ಯಯುತ ಹಲಸಿನ ಹಣ್ಣು ಕುರಿತ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೀವತ್ಸ ಸ್ವಾಗತಿಸಿ ಕೌಶಿಕ್ ವಂದಿಸಿದರು. ವಿಕ್ರಮ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment