“ಪರಿಸರ ಜನಜೀವನದ ಅವಿಭಾಜ್ಯ ಘಟಕ. ಶಾಂತ ಮತ್ತು ಸುಂದರ ಪರಿಸರ ಬದುಕಿಗೆ ಪೂರಕ
ವಾತಾವರಣವನ್ನು ಕಟ್ಟಿಕೊಡುತ್ತವೆ. ಅಂತಹ ಪ್ರಕೃತಿ ನಮ್ಮ ಉಸಿರಾಗಬೇಕು. ಆ ಮೂಲಕ ನೆಮ್ಮದಿಯ ಜೀವನವನ್ನು
ನಡೆಸಲು ಸಾಧ್ಯವಾಗಬೇಕು” ಎಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್
ದರ್ಬೆ ಮಾರ್ಗ ಅಭಿಪ್ರಾಯಪಟ್ಟರು. ಅವರು 09.07.2013 ಮಂಗಳವಾರ ನಮ್ಮ ವಿದ್ಯಾಪೀಠದಲ್ಲಿ
ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಜರಗಿದ ‘ಪರಿಸರ ಮಾಹಿತಿ ಕಾರ್ಯಕ್ರಮ’ದ
ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ನಿವೃತ್ತ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಿ.ವಿಘ್ನೇಶ್ವರ ಭಟ್ ಮುಖ್ಯ ಅತಿಥಿಗಳಾಗಿದ್ದರು. ದಿ|ಕೊಡಗಿನ
ಗೌರಮ್ಮ ದತ್ತಿನಿಧಿ ಕಥಾಸ್ಪರ್ಧೆಯ ಸಂಚಾಲಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಜಯಶ್ರೀ.ಎಂ.ಸಿ ಸ್ವಾಗತಿಸಿ ಶ್ರಾವ್ಯ.ಕೆ ವಂದಿಸಿದರು. ಚೈತ್ರ.ಕೆ
ಮತ್ತು ತಂಡ ಪ್ರಾರ್ಥನೆ ಮಾಡಿದರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕ ವಿನಾಯಕ ಕಾರ್ಯಕ್ರಮ
ನಿರೂಪಿಸಿದರು.
No comments:
Post a Comment