Jul 21, 2013

ರಕ್ಷಕ ಶಿಕ್ಷಕ ಸಂಘದ ಮಹಾಸಭೆ - 2013


  “ಮನೆಯೇ ಮೊದಲ ಪಾಠಶಾಲೆ ಎನ್ನುವುದು ಸಾರ್ವಕಾಲಿಕ ಸತ್ಯ. ಶಾಲೆ, ಸಮಾಜ, ಪರಿಸ್ಥಿತಿಗಳು ಎಷ್ಟು ಬದಲಾದರೂ ವಿದ್ಯಾರ್ಥಿಗಳ ಕಡೆಗಿನ ಹೆಚ್ಚಿನ ಗಮನವನ್ನು ಹೆತ್ತವರೇ ಹೊತ್ತುಕೊಳ್ಳಬೇಕು, ಶಿಕ್ಷಕರು ಈ ನಿಟ್ಟಿನಲ್ಲಿ ಸಹಕಾರಿಗಳಾಗಿರಬೇಕು. ರಕ್ಷಕ ಮತ್ತು ಶಿಕ್ಷಕರ ಉತ್ತಮ ಬಾಂಧವ್ಯ ಶಾಲೆಯ ಬೆಳವಣಿಗೆಗೆ ಅತ್ಯಂತ ಅಪೇಕ್ಷಣೀಯ ಎಂದು ನಮ್ಮ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್, ಬೆಜ್ಪೆ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ವಿದ್ಯಾಪೀಠದಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

   ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ-ಮಾರ್ಗ ವರದಿ ವಾಚಿಸಿದರು. ಶಾಲಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಮಾತೃಮಂಡಳಿಯ ಅಧ್ಯಕ್ಷೆ ಕಮಲಾಕ್ಷಿ ಸೂರಂಬೈಲು ಉಪಸ್ಥಿತರಿದ್ದರು. ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿ ವಿದ್ಯಾ.ಎನ್ ಹೆಗಡೆ ವಂದಿಸಿದರು.

No comments:

Post a Comment