ನಮ್ಮ ವಿದ್ಯಾಪೀಠದ 2013-14ನೇ ಸಾಲಿನ ವಿದ್ಯಾರ್ಥಿ ನಾಯಕರ ಆಯ್ಕೆ ನಿನ್ನೆ 15.06.2013 ಶನಿವಾರ ನಡೆಯಿತು. ವಿದ್ಯಾರ್ಥಿ ನಾಯಕಿಯಾಗಿ ಹತ್ತನೇ ತರಗತಿಯ ಶ್ವೇತಾ.ಕೆ,
ವಿದ್ಯಾರ್ಥಿ ಉಪನಾಯಕರಾಗಿ ಒಂಬತ್ತನೇ ತರಗತಿಯ ಪ್ರಜ್ವಲ್ ಆಯ್ಕೆಯಾಗಿದ್ದಾರೆ. ಇಬ್ಬರಿಗೂ ಶುಭಾಶಯಗಳು...
ಮುಜುಂಗಾವಿನ ಶಾಂತ, ಸುಂದರ ಪರಿಸರದಲ್ಲಿ ಪುಟ್ಟ ಮಕ್ಕಳ ಜ್ಞಾನ ದಾಹವನ್ನು ತಣಿಸುವ ನಿಟ್ಟಿನಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ನಿರ್ದೇಶನದಂತೆ ತಲೆಯೆತ್ತಿದ ಸಂಸ್ಥೆ ಶ್ರೀ ಭಾರತೀ ವಿದ್ಯಾಪೀಠ.
ಕೇರಳ ರಾಜ್ಯದ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ೪ ಕಿಲೋಮೀಟರ್ ದೂರದಲ್ಲಿರುವ ಈ ಸಂಸ್ಥೆಗೆ ಈಗ ಎಂಟರ ಹರೆಯ. ಶಾಲಾ ಜೀವನದ ಸುಖ ಹಂಚಿಕೊಳ್ಳುವುದಕ್ಕಾಗಿ ನಿಮ್ಮ ಎದುರು ಈ ಬ್ಲಾಗ್ ತೆರೆದಿರಿಸಿದ್ದೇವೆ. ಶಾಲಾ ವರದಿಗಳು, ನಾವು ಬರೆದ ಕಥೆ, ಕವನ, ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ. ಓದಿ, ಅಭಿಪ್ರಾಯ ತಿಳಿಸಿ...
Congratulations for my dear juniors.... :)
ReplyDelete