“ವೇದ ಅಧ್ಯಯನ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ.
ಪ್ರಸ್ತುತ ಸಮಾಜದಲ್ಲಿ ವೇದ ಮತ್ತು ಶಾಸ್ತ್ರಗಳ ಅಧ್ಯಯನದ ಕಡೆಗೆ ಜನ ಹೆಚ್ಚು ಹೆಚ್ಚು
ಆಕರ್ಷಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅಪೇಕ್ಷೆಯಂತೆ ಮುಜುಂಗಾವಿನ
ದೇವ-ವೈದ್ಯ-ವೇದಗಳ ಸಂಗಮ ಭೂಮಿಯಲ್ಲಿ ನಡೆದ ವಸಂತವೇದ ಶಿಬಿರ ಯಶಸ್ವಿಯಾಗಿದೆ ಎಂದು
ಸೀತಾಂಗೋಳಿ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು
19.05.2013 ಭಾನುವಾರ ನಮ್ಮ ವಿದ್ಯಾಪೀಠದಲ್ಲಿ ಕಳೆದ ಒಂದೂವರೆ
ತಿಂಗಳು ಕಾಲ ವೇ|ಮೂ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿದ ವಸಂತ ವೇದ
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬೆಂಗಳೂರು ‘ಬೆಲ್’ ಸಂಸ್ಥೆಯ ಇಂಜಿನಿಯರ್ ರಾಮಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ವೇದ ಶಿಕ್ಷಣ ನೀಡಿದ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ, ನಾರಾಯಣ.ಜಿ.ಹೆಗಡೆ ಮತ್ತು ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನೀಶ ಅಮ್ಮಂಕಲ್ಲು ಸ್ವಾಗತಿಸಿ ಶಶಿಧರ ಪದ್ಯಾಣ ವಂದಿಸಿದರು. ಕೃಷ್ಣಕುಮಾರ ಕೋಣಮ್ಮೆ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು ‘ಬೆಲ್’ ಸಂಸ್ಥೆಯ ಇಂಜಿನಿಯರ್ ರಾಮಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ವೇದ ಶಿಕ್ಷಣ ನೀಡಿದ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ, ನಾರಾಯಣ.ಜಿ.ಹೆಗಡೆ ಮತ್ತು ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮನೀಶ ಅಮ್ಮಂಕಲ್ಲು ಸ್ವಾಗತಿಸಿ ಶಶಿಧರ ಪದ್ಯಾಣ ವಂದಿಸಿದರು. ಕೃಷ್ಣಕುಮಾರ ಕೋಣಮ್ಮೆ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment