Jun 7, 2012

‘ಸ್ಪಂದನ-2012’


ನಮ್ಮ ವಿದ್ಯಾಪೀಠದಿಂದ ಎಸ್.ಎಸ್.ಎಲ್.ಸಿ ಪೂರೈಸುತ್ತಿರುವ ಪ್ರಥಮ ತಂಡ ಹೊರ ಜಗತ್ತಿಗೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಲೋಕವನ್ನು ಬೆಳಗಲೆಂಬ ಸದಾಶಯದೊಂದಿಗೆ ಅಡಳಿತ ಮಂಡಳಿ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ದೀಪಗಳನ್ನು ವಿತರಿಸಿ ಶುಭ ಹಾರೈಸಿದರು. ನಿವೃತ್ತ ಶಿಕ್ಷಕ ಬೀಚಿತ್ಲು ಶಂಕರನಾರಾಯಣ ಭಟ್ ಹಿತವಚನಗಳನ್ನು ಹೇಳಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸ್ಪಂದನ-2012’ನ್ನು ಅರ್ಥಪೂರ್ಣವಾಗಿಸಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು.

No comments:

Post a Comment