Jun 14, 2012

ವಸಂತ ವೇದ ಶಿಬಿರ


ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಬೇಸಿಗೆ ರಜಾ ಕಾಲದ ‘ಶ್ರೀ ಶಂಕರ ವಸಂತ ವೇದ ಶಿಬಿರ’ ದ್ವಿತೀಯ ವರ್ಷಕ್ಕೆ ಕಾಲಿರಿಸಿದೆ. ಮುಜುಂಗಾವಿನ ಗ್ರಾಮೀಣ ಪರಿಸರದಲ್ಲಿ, ದೇವಾಲಯ, ನೇತ್ರಾಲಯ ಮತ್ತು ವಿದ್ಯಾಲಯಗಳ ಸಂಗಮ ಭೂಮಿಯಲ್ಲಿನ ಪ್ರಶಾಂತ ವಾತಾವರಣದಲ್ಲಿ ಪ್ರಸ್ತುತ ೨೫ ಮಂದಿ ವಿದ್ಯಾರ್ಥಿಗಳು ವೇದಾಧ್ಯಯನ ನಿರತರಾಗಿದ್ದಾರೆ. ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರ ಮಾರ್ಗದರ್ಶನದಲ್ಲಿ ಮಣಿಮುಂಡ ವಿಶ್ವೇಶ್ವರ ಶಾಸ್ತ್ರಿಗಳು ರಜಾಕಾಲದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ.
ಸಂಧ್ಯಾವಂದನಂ, ಶ್ರೀ ರುದ್ರಪ್ರಶ್ನ, ಚಮಕ, ಪಂಚಾಯತನ ಪೂಜೆ ಇತ್ಯಾದಿಗಳ ಮಂತ್ರಗಳನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆ ಮಾರ್ಗ ಇವರು ಶಿಬಿರದ ಯಶಸ್ಸಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಮಂಜೇಶ್ವರ ಎಸ್.ಎ.ಟಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕ ನಾರಾಯಣ ಜಿ.ಹೆಗಡೆ ವಿದ್ಯಾರ್ಥಿಗಳಿಗೆ ಸಂಸ್ಕೃತ ತರಗತಿ ಮತ್ತು ಸುಭಾಷಿತ ಶಿಕ್ಷಣವನ್ನೂ ವಿವರಣೆಯನ್ನು ನೀಡುತ್ತಿದ್ದಾರೆ. ಎರಡು ತಿಂಗಳ ಬೇಸಿಗೆ ರಜಾಕಾಲದ ವೇದಾಧ್ಯಯನಕ್ಕಾಗಿ ದೂರದ ಊರನ್ನು ತಲಪಬೇಕಾದ ವಿದ್ಯಾರ್ಥಿಗಳಿಗೆ ಈ ಸೌಕರ್ಯವು ಪಕ್ಕದ ಮುಜುಂಗಾವಿನಲ್ಲಿಯೇ ದೊರೆತಿರುವುದು ಸಂತಸ ತಂದಿದೆ.

No comments:

Post a Comment