Feb 28, 2011

ರಕ್ಷಕ ಶಿಕ್ಷಕ ಸಂಘದ ಸಭೆ

ನಮ್ಮ ವಿದ್ಯಾಪೀಠದಲ್ಲಿ ಇಂದು ರಕ್ಷಕ ಶಿಕ್ಷಕ ಸಂಘದ ಸಭೆ. ವಿದ್ಯಾಪೀಠದ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ವಿದ್ಯಾರ್ಥಿಗಳಿಂದ ವಿಸ್ಮಯ ಪ್ರವಾಸದ ಅನುಭವ ಕಥನ, ವಿಸ್ಮಯ ಪ್ರವಾಸದ ಖರ್ಚು ವೆಚ್ಚ, ವಾರ್ಷಿಕೋತ್ಸವದ ಆಯ ವ್ಯಯ ಮಂಡನೆಗಳು ನಡೆದವು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಶ್ಯಾಮ ಭಟ್, ದರ್ಬೆ-ಮಾರ್ಗ ಮತ್ತಿತರರು ಉಪಸ್ಥಿತರಿದರು. ಮಾತಾಶ್ರೀ ಶಾಂಭವಿ ಸ್ವಾಗತಿಸಿ, ಮಾತಾಶ್ರೀ ಲಾವಣ್ಯ ಧನ್ಯವಾದ ಸಮರ್ಪಿಸಿದರು.

No comments:

Post a Comment