Feb 24, 2011

ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ

ಶ್ರೀ ಭಾರತೀ ಸಮೂಹ ವಿದ್ಯಾಸಂಸ್ಥೆಗಳ ಸಹಾಯಾರ್ಥ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ದಿನಾಂಕ 01.03.2011 ಮಂಗಳವಾರ ಸಂಜೆ ಗಂಟೆ 6.30 ರಿಂದ 10.30 ರ ತನಕ ವಿದ್ಯಾಲಯದ ವಠಾರದಲ್ಲಿ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪದ್ಯಾಣ ಗಣಪತಿ ಭಟ್ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತರಾಗಿಯೂ ಹೆಸರಾಂತ ಕಲಾವಿದರು ವೇಷಧಾರಿಗಳಾಗಿಯೂ ಭಾಗವಹಿಸಲಿದ್ದಾರೆ. ಎಲ್ಲ ಕಲಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಯಲಾಟವನ್ನು ಯಶಸ್ವಿಗೊಳಿಸಬೇಕಾಗಿ ಅಪೇಕ್ಷೆ.

No comments:

Post a Comment