ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ಶಾಲಾ ಪರಿಸರದ ಶುಚೀಕರಣ ಕಾರ್ಯಕ್ರಮವು ಇಂದು ಜರಗಿತು. ಗ್ರಾಮೋತ್ಥಾನ ಸಮಿತಿಯ ಚಂದ್ರಶೇಖರ, ಮುನ್ನಿಪ್ಪಾಡಿ ಶಂಕರನಾರಾಯಣ ರಾವ್, ಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು ಮತ್ತು ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.
ಮುಜುಂಗಾವಿನ ಶಾಂತ, ಸುಂದರ ಪರಿಸರದಲ್ಲಿ ಪುಟ್ಟ ಮಕ್ಕಳ ಜ್ಞಾನ ದಾಹವನ್ನು ತಣಿಸುವ ನಿಟ್ಟಿನಲ್ಲಿ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ನಿರ್ದೇಶನದಂತೆ ತಲೆಯೆತ್ತಿದ ಸಂಸ್ಥೆ ಶ್ರೀ ಭಾರತೀ ವಿದ್ಯಾಪೀಠ.
ಕೇರಳ ರಾಜ್ಯದ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಯಿಂದ ೪ ಕಿಲೋಮೀಟರ್ ದೂರದಲ್ಲಿರುವ ಈ ಸಂಸ್ಥೆಗೆ ಈಗ ಎಂಟರ ಹರೆಯ. ಶಾಲಾ ಜೀವನದ ಸುಖ ಹಂಚಿಕೊಳ್ಳುವುದಕ್ಕಾಗಿ ನಿಮ್ಮ ಎದುರು ಈ ಬ್ಲಾಗ್ ತೆರೆದಿರಿಸಿದ್ದೇವೆ. ಶಾಲಾ ವರದಿಗಳು, ನಾವು ಬರೆದ ಕಥೆ, ಕವನ, ಚಿತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ. ಓದಿ, ಅಭಿಪ್ರಾಯ ತಿಳಿಸಿ...
No comments:
Post a Comment