Oct 29, 2014

“ಬಾಳೆಕಾಯಿಯಿಂದ ಮೌಲ್ಯವರ್ಧಿತ ಉತ್ಪನ್ನ: ಡಾ|ಸರಿತಾ ಹೆಗ್ಡೆ''

                ಬಾಳೆಕಾಯಿಯನ್ನು ಬೇಯಿಸಿ ತಯಾರಿಸುವ ಸೇಮಗೆಯು ಮೌಲ್ಯವರ್ಧಿತ ಉತ್ಪನ್ನವಾಗಿದ್ದು ಬಹುಕಾಲ ಬಾಳ್ವಿಕೆ ಬರುತ್ತದೆ. ಹಣ್ಣಾದರೆ ಬಹುಬೇಗನೆ ಕೊಳೆತು ಹೋಗುವ ತಳಿಯ ಬಾಳೆಕಾಯಿಗಳನ್ನು ರೀತಿ ಸಂರಕ್ಷಿಸಿ ವಿವಿಧ ರೂಪಗಳಲ್ಲಿ ಬಳಸಬಹುದು. ಜನಸಾಮಾನ್ಯರಿಗೆ ಬಗ್ಗೆ ತಿಳುವಳಿಕೆಯನ್ನು ನೀಡಲು ಕೃಷಿ ವಿಜ್ಞಾನ ಕೇಂದ್ರವು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆಎಂದು ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಡಾ|ಸರಿತಾ ಹೆಗ್ಡೆ ಅಭಿಪ್ರಾಯಪಟ್ಟರು. ಅವರು 13.10.2014 ಸೋಮವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಮೌಲ್ಯಯುತ ಬಾಳೆಕಾಯಿಯ ಕುರಿತ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಶಾಲಾ ಸಮಿತಿಯ ಜೊತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಕ್ರಂ ಸ್ವಾಗತಿಸಿ ನಿಶಿತಾ.ಎನ್ ವಂದಿಸಿದರು. ಶ್ರೀಜಾ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment