Apr 22, 2014

ವಸಂತ ವೇದ ಶಿಬಿರ - 2014



“ಪ್ರಾಚೀನ ಮತ್ತು ಪರಂಪರಾಗತವಾಗಿ ಬಂದ ಎಲ್ಲ ಅಧ್ಯಯನಗಳೂ ವೇದದ ತಳಹದಿಯಲ್ಲಿ ಬೆಳೆದಿವೆ. ವೇದದ ಅಧ್ಯಯನವು ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಮುಜುಂಗಾವಿನ ದೇವ-ವೈದ್ಯ-ವೇದಗಳ ಸಂಗಮ ಭೂಮಿಯಲ್ಲಿ ನಡೆಯುವ ಈ ವಸಂತವೇದ ಶಿಬಿರವು ಯಶಸ್ವಿಯಾಗಲಿ" ಎಂದು ಕುಂಬಳೆ ವಲಯ ಕಾರ್ಯದರ್ಶಿ ಎಚ್.ಸತ್ಯಶಂಕರ ಭಟ್ ಹಿಳ್ಳೆಮನೆ ಅಭಿಪ್ರಾಯಪಟ್ಟರು. ಅವರು 10.04.2014 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ವೇ|ಮೂ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ಆಯೋಜಿಸಲಾದ ವಸಂತ ವೇದ ಶಿಬಿರದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡುತ್ತಿದ್ದರು.

ವೇದ ಶಿಕ್ಷಣ ನೀಡುವ ವೇ|ಮೂ ವಿಶ್ವೇಶ್ವರ ಭಟ್ ಮಣಿಮುಂಡ, ನಾರಾಯಣ.ಜಿ.ಹೆಗಡೆ ಮತ್ತು ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ಶ್ರೀ ಭಾರತೀ ಸಮೂಹ ವಿದ್ಯಾ ಸಂಸ್ಥೆಗಳ ಜತೆಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಸ್ವಾಗತಿಸಿದರು. ಶ್ರೀ ಭಾರತೀ ವಿದ್ಯಾಪೀಠದ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ವಂದಿಸಿದರು.

No comments:

Post a Comment