Apr 22, 2014

ಸ್ಪಂದನ 2014



         

    “ಜೀವನದ ಹಾದಿಯುದ್ದಕ್ಕೂ ಬಾಲ್ಯ ಕಾಲದ ಶಾಲಾ ಜೀವನ ಅವಿಸ್ಮರಣೀಯ ಆನಂದವನ್ನು ಕಟ್ಟಿಕೊಡುತ್ತದೆ. ಈ ಹಂತದಲ್ಲಿ ಬದುಕಿನ ಭವಿಷ್ಯ ಅರಳತೊಡಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಶಾಲೆಯಿಂದ ತೇರ್ಗಡೆ ಹೊಂದಿ, ಬೀಳ್ಕೊಡುವ ಹಂತದಲ್ಲಿ ವಿದ್ಯಾರ್ಥಿಯು ಮಾತೃ ಶಾಲೆಯ ಸ್ಮರಣೆ ಮಾಡುತ್ತಿದ್ದಾನೆಂದರೆ ಆತನಿಗೆ ಶಾಲೆಯು ಉತ್ತಮ ನೈತಿಕ ಶಿಕ್ಷಣವನ್ನು ನೀಡಿದೆ ಎಂದು ತಿಳಿದುಕೊಳ್ಳಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಮಹಿಳಾ ವಿಭಾಗದ ಅಧಕ್ಷೆ ವಿಜಯಲಕ್ಷ್ಮಿ ಶಾನುಭೋಗ್ ಕೂಡ್ಲು ಅಭಿಪ್ರಾಯಪಟ್ಟರು. ಅವರು 27.03.2014 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡುವ ‘ಸ್ಪಂದನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
   ಶಾಲಾ ಸಮಿತಿಯ ಜತೆ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವಿಕ್ರಮ್.ಬಿ ಸ್ವಾಗತಿಸಿ ತೀಕ್ಷಾ ವಂದಿಸಿದರು. ಶಾಲೆಯ ವತಿಯಿಂದ ಬೆಳಕಿನ ಸಂಕೇತವಾಗಿ ವಿದ್ಯಾರ್ಥಿಗಳಿಗೆ ಪ್ರಜ್ವಲಿಸುತ್ತಿರುವ ದೀಪವನ್ನು ನೀಡಲಾಯಿತು. ವಿದ್ಯಾರ್ಥಿಗಳು ಶಾಲೆಗೆ ಸ್ಮರಣಿಕೆಯಾಗಿ ಕವಾಟು ಸಮರ್ಪಿಸಿದರು.

No comments:

Post a Comment