Aug 14, 2013

ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’


“ಮಹಾತ್ಮರ ಜೀವನ ಚರಿತ್ರೆ ವಿದ್ಯಾರ್ಥಿಗಳಿಗೆ ಬದುಕಿನ ಪಾಠವನ್ನು ಹೇಳಿಕೊಡುತ್ತವೆ. ನಮ್ಮ ಜೀವನದ ಹಾದಿ ಮುಂದಿನ ದಿನಗಳಲ್ಲಿ ಇಂತಹ ಮಹತ್ವದ ಘಟ್ಟವನ್ನು ಹಾದು ಹೋಗುತ್ತವೆ. ಆದ್ದರಿಂದ ನಮ್ಮ ದಿನಚರಿಯನ್ನು ಬರೆದಿಡುವುದು ತುಂಬ ಅಗತ್ಯ. ಗತ, ವರ್ತಮಾನ ಕಾಲಗಳಲ್ಲಿ ಮಾಡಿದ ತಪ್ಪನ್ನು ಭವಿಷ್ಯದಲ್ಲಿ ತಿದ್ದಿಕೊಳ್ಳಲು ಈ ವಿಧಾನ ನಮಗೆ ಸಹಾಯಕಾರಿ. ಮನದಲ್ಲಿ ತಲೆ ಎತ್ತುವ ಸಂದೇಹಗಳನ್ನು ಈ ಪುಸ್ತಕದ ಬದಿಯಲ್ಲಿ ಬರೆದಿಟ್ಟು ಹಿರಿಯರಿಂದ ಉತ್ತರವನ್ನು ಕೇಳಿ ಬರೆದಿಟ್ಟುಕೊಳ್ಳಿ. ಇದು ನಮಗೆ ಬದುಕಿನ ಪಾಠವನ್ನು ಹೇಳುತ್ತವೆ. ” ಎಂದು ಕಥೆಗಾರ್ತಿ ಅನುಪಮಾ ಪ್ರಸಾದ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಅಗೋಸ್ತು ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಪ್ರಜ್ವಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ.ಕೆ ಪ್ರಾಸ್ತಾವಿಕ ಭಾಷಣ ಮಾಡಿದರು. ಗೌರೀಶ ವಿಶ್ವಾಮಿತ್ರ ಗತವರ್ಷದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ತೀಕ್ಷಾ ಸ್ವಾಗತಿಸಿ ವಿಕ್ರಮ್ ವಂದಿಸಿದರು. ದೀಪಕ್ ಶ್ರೀವತ್ಸ ಮತ್ತು ಕೌಶಿಕ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment