Aug 28, 2013

ಶ್ರೀಕೃಷ್ಣ ಜಯಂತಿ - 2013

  
“ಲೋಕದಲ್ಲಿ ಅನಾಚಾರಗಳು ಮೈತಳೆದಾಗ ಭಗವಾನ್ ವಿಷ್ಣು ಶ್ರೀಕೃಷ್ಣನಾಗಿ ಅವತಾರ ತಳೆದ. ನಾಡಿನ ಉನ್ನತಿಗೆ ಕಾರಣನಾದ. ಬಾಲಕರಿಗೆ ಪ್ರೀತಿಯ ಗೆಳೆಯನಾಗಿ, ಪಾಂಡವರ ಅಭ್ಯುದಯಕ್ಕಾಗಿ, ಲೋಕದ ಒಳಿತಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಂಡು ನಮ್ಮೆಲ್ಲರ ಆತ್ಮೀಯ ದೇವರಾದ. ಅವನ ಜನ್ಮದಿನವನ್ನು ಆಚರಿಸುವುದು ಸನ್ಮಾರ್ಗದ ಕಡೆಗೆ ನಮ್ಮನ್ನು ಪ್ರೇರೇಪಿಸಲು ಸಹಾಯಕರವಾಗಲಿ" ಎಂದು ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಹರಿಣಿ.ಜಿ.ಕೆ.ನಾಯಕ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ವಿದ್ಯಾಪೀಠದಲ್ಲಿ ಜರಗಿದ ಶ್ರೀಕೃಷ್ಣ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

    ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಹೋಲಿ ಫ್ಯಾಮಿಲಿ ಹಿರಿಯ ಬುನಾದಿ ಶಾಲೆಯ ಸಂಸ್ಕೃತ ಶಿಕ್ಷಕ ಬಾಲಕೃಷ್ಣ ಶರ್ಮ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ ಭಟ್ ಮಡ್ವ, ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ  ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸ್ಕಂದಮುರಳಿ ಸ್ವಾಗತಿಸಿ ಪ್ರಶಾಂತ.ಎಂ ವಂದಿಸಿದರು. ಕೃಷ್ಣಶೌರಿ ಡಿ.ಎಸ್ ಪ್ರಾರ್ಥಿಸಿದರು.  ಸ್ಮಿತಾ ಆಳ್ವ ಮತ್ತು ಸುಮೇಘ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment