Aug 19, 2011

'ರಾಮಾಯಣ ಮಾಸಾಚರಣೆ’ ಸಮಾರೋಪ

ನಮ್ಮ ವಿದ್ಯಾಪೀಠದಲ್ಲಿ ೧೮.೦೮.೨೦೧೧ ಗುರುವಾರ ಜರಗಿದ ‘ರಾಮಾಯಣ ಮಾಸಾಚರಣೆ’ಯ ಸಮಾರೋಪ ಮತ್ತು ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಉಂಡೆಮನೆ ಗಣಪತಿ ಭಟ್ಟ ಮುಖ್ಯ ಭಾಷಣ ಮಾಡಿದರು. ಶಾಲಾ ವಿದ್ಯಾರ್ಥಿ ನಿಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು.
ಶಾಲಾ ನಾಯಕ ಸುಹಾಸ್ ಕಾಕತ್ಕರ್ ಸ್ವಾಗತಿಸಿ, ವಿದ್ಯಾರ್ಥಿನಿ ಅಶ್ವತಿ ವಂದಿಸಿದರು. ಕೃಷ್ಣ ಕಿರಣ ವರದಿ ವಾಚಿಸಿದರು. ಅನುಷ ಮತ್ತು ಅರ್ಪಿತ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment