Aug 5, 2011

ಚಿಂತನ ಭಾರತೀ

ಮೊನ್ನೆ ಜುಲೈ ೨೯ಕ್ಕೆ ನಮ್ಮಲ್ಲಿ ಅಧ್ಯಾಪಕರಿಗಾಗಿ ವಿಶೇಷ ಕಾರ್ಯಕ್ರಮ ’ಚಿಂತನ ಭಾರತೀ’. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಅನಂತಪುರ ಇವರಿಂದ ಅಧ್ಯಾಪಕರಿಗಾಗಿ ವಿಶೇಷ ತರಬೇತಿ ಏರ್ಪಡಿಸಲಾಗಿತ್ತು. ಬದಿಯಡ್ಕ ಮತ್ತು ನಮ್ಮ ಮುಜುಂಗಾವು ವಿದ್ಯಾಪೀಠಗಳ ಅಧ್ಯಾಪಕರು ತರಬೇತಿಯಲ್ಲಿ ಪಾಲ್ಗೊಂಡರು. ನಿವೃತ್ತ ಶಿಕ್ಷಕ ಕೃಷ್ಣ ಭಟ್ ಉದ್ಘಾಟಿಸಿದರು. ಬದಿಯಡ್ಕ ಭಾರತೀ ವಿದ್ಯಾಪೀಠದ ಪ್ರಧಾನಾಚಾರ್ಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮತ್ತು ನಮ್ಮ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಅಧ್ಯಾಪಕರು ಕಾರ್ಯಕ್ರಮದ ಗುಣಾತ್ಮಕ ಫಲಗಳನ್ನು ಪಡೆದುಕೊಂಡರು.

No comments:

Post a Comment