Aug 21, 2010

ಬಾಂಧವ್ಯದ ಸಂಕೇತ ರಕ್ಷಾಬಂಧನ

“ರಕ್ಷಾಬಂಧನ ಅಣ್ಣತಂಗಿಯರಿಗೆ ಪ್ರೀತಿಯ ದಿನ. ತಂಗಿ ಅಣ್ಣನಿಗೆ ನೀಡುವ ರಕ್ಷಾಬಂಧನ ಸಹೋದರತೆಯ ಪರಮ ಸಂಕಲ್ಪವನ್ನು ಅನಾವರಣಗೊಳಿಸುತ್ತದೆ. ಈ ಬಾರಿ ಓಣಂ ಮತ್ತು ರಕ್ಷಾಬಂಧನ ಜೊತೆಯಾಗಿ ಬಂದಿರುವುದು ಹಬ್ಬಗಳ ಆಚರಣೆಯ ಮಹತ್ವವನ್ನು ಹೆಚ್ಚಿಸುತ್ತದೆ. ಕೋಮು ಸೌಹಾರ್ದಕ್ಕೆ ಕಾರಣವಾಗುವ ಓಣಂ ಹಬ್ಬ ನಾಡಿನ ಒಳಿತಿಗೆ ಪ್ರಯತ್ನಿಸುತ್ತದೆ" ಎಂದು ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಳ ಪ್ರೌಢಶಾಲಾ ಸಂಸ್ಕೃತ ಶಿಕ್ಷಕ ನಾರಾಯಣ ಜಿ.ಹೆಗಡೆ ಅಭಿಪ್ರಾಯಪಟ್ಟರು. ಅವರು ೨೧.೦೮.೨೦೧೦ ಶನಿವಾರ ನಮ್ಮ ಶಾಲೆಯಲ್ಲಿ ರಕ್ಷಾಬಂಧನ ಮತ್ತು ಓಣಂ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಭಾರತೀ ಸಂಸ್ಕೃತ ಮಹಾವಿದ್ಯಾಲಯ ಪ್ರಾಂಶುಪಾಲ ಕೃಷ್ಣಮೂರ್ತಿ ಪುದುಕೋಳಿ, ಶ್ರೀ ಭಾರತೀ ವಿದ್ಯಾಪೀಠ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆಮಾರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶ್ವತಿ ಸ್ವಾಗತಿಸಿ ಕಿರಣ ಮಹೇಶ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.

1 comment:

  1. Bharatheeya samskritiya dyotakavada RAKSHABANDHANAda acharane namagellarigu hemmeya vishaya

    ReplyDelete