Jun 1, 2016

ಶಾಲಾ ಪ್ರವೇಶೋತ್ಸವ – 2016




ನೂತನ ಅಧ್ಯಯನ ವರ್ಷದ ಆರಂಭವು ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿದವು. ಹೊಸ ಕನಸುಗಳೊಂದಿಗೆ ಮುಜುಂಗಾವಿನ ಪ್ರಶಾಂತ ಪರಿಸರದಲ್ಲಿ ವಿದ್ಯಾರ್ಜನೆಗೆ ಆಗಮಿಸಿದ ಪುಟಾಣಿಗಳನ್ನು ಬಲೂನು ಮತ್ತು ಸಿಹಿ ತಿಂಡಿಗಳನ್ನು ನೀಡಿ ಸ್ವಾಗತಿಸಲಾಯಿತು. ನಮ್ಮ ಸಂಭ್ರಮದ ಜೊತೆಗೆ ಕಾಸರಗೋಡಿನಲ್ಲಿ ಲೆಕ್ಕ ಪರಿಶೋಧಕರಾಗಿರುವ ಶಿವಶಂಕರ ಭಟ್ ಕೋಡಿಮೂಲೆ ಸಹಕರಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಆರ್ಥಿಕವಾಗಿ ಹಿಂದಿರುವ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸಹಾಯ ಧನವನ್ನು ವಿತರಿಸಲಾಯಿತು.
ಶಾಲಾ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ರಾವ್ ಮುನ್ನಿಪ್ಪಾಡಿ ಸಭೆಯ ಅಧ್ಯಕ್ಷತೆ ವಹಿಸಿದರು. ಶಾಲಾ ಸಮಿತಿಯ ಶ್ರೀಕೃಷ್ಣ ಪ್ರಸಾದ್ ಕಾವೇರಿಕಾನ, ಶಾಲಾ ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆ-ಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾ ಸರಸ್ವತಿ ಪೆರಡಾನ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸೃಷ್ಟಿಕ್ ಮಯ್ಯ ಸ್ವಾಗತಿಸಿ, ಆಶ್ರಿತ್ ನಾರಾಯಣ ವಂದಿಸಿದರು. ಕಿಶೋರಕೃಷ್ಣ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು.



No comments:

Post a Comment