“ಹದಿಹರೆಯದ ಮಕ್ಕಳು ಸಮಾಜದ ಸೊತ್ತು. ಅವುಗಳನ್ನು ಹಾಳುಗೆಡವಬಾರದು. ಬೆಳೆಯುತ್ತಿರುವ ಗಿಡವನ್ನು ಚಿವುಟಿದರೆ ಅವುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಬೆಳೆಯಬೇಕು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು." ಎಂದು ಕಾಸರಗೋಡಿನ ಖ್ಯಾತ ವೈದ್ಯೆ ಡಾ|ವಾರುಣಿ ಶ್ರೀರಾಮ್ ಅಭಿಪ್ರಾಯಪಟ್ಟರು. ಅವರು ಮೊನ್ನೆ 05.12.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ‘ಜ್ಞಾನ ಭಾರತೀ’ ಕಾರ್ಯಕ್ರಮ ಸರಣಿಯ ‘ವೈದ್ಯರೊಂದಿಗೆ ಮಾತುಕತೆ’ಯಲ್ಲಿ ವಿದ್ಯಾರ್ಥಿನಿಯರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರು.
ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.
ಶಾಲಾ ವಿದ್ಯಾರ್ಥಿ ನಾಯಕಿ ಶ್ವೇತಾ ಸ್ವಾಗತಿಸಿ ಮಾನಸ ವಂದಿಸಿದರು.
No comments:
Post a Comment