Nov 15, 2013

ಪ್ರತಿಭಾ ಭಾರತೀ - ನವೆಂಬರ್



“ಮಕ್ಕಳು ನಾಡಿನ ಸಂಪತ್ತು. ಅವರ ಜೊತೆಗಿನ ಬಾಂಧವ್ಯ ವೃದ್ಧಿಗಾಗಿ ಹಿರಿಯರು ಕಂಡ ದಾರಿ ಮಕ್ಕಳ ದಿನಾಚರಣೆ. ಪಂಡಿತ್ ಜವಹರಲಾಲ್ ನೆಹರೂ ಅವರಿಗೆ ಪುಟಾಣಿಗಳ ಮೇಲಿದ್ದ ಪ್ರೀತಿ ವ್ಯಕ್ತವಾದ ಈ ಪರಿ ಮಕ್ಕಳ ದಿನದ ಆಚರಣೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡುವ ಮಕ್ಕಳು ತಮ್ಮ ಪ್ರತಿಭೆಯನ್ನು ಬಹುಮುಖಿಯಾಗಿಸುತ್ತಾರೆ. ಅನುಭವಿಸುತ್ತಾ ನೀಡುವ ಈ ಕಾರ್ಯಕ್ರಮಗಳು ಆನಂದದಾಯಕವಾಗಿರುತ್ತವೆ.” ಎಂದು ಕುಂಬಳೆ ವಲಯ ಅಧ್ಯಕ್ಷ ಇ. ಕೃಷ್ಣಮೋಹನ ಭಟ್ ಅಭಿಪ್ರಾಯಪಟ್ಟರು. ಅವರು ನಿನ್ನೆ 14.11.2013 ಗುರುವಾರ ನಮ್ಮ ವಿದ್ಯಾಪೀಠದಲ್ಲಿ ಜರಗಿದ ನವೆಂಬರ್ ತಿಂಗಳ ‘ಪ್ರತಿಭಾ ಭಾರತೀ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿ ಶ್ರೀವತ್ಸ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಮಿತಿಯ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ, ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಬೆ ಮಾರ್ಗ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಗೌರೀಶ ವಿಶ್ವಾಮಿತ್ರ ಗತ ಕಾರ್ಯಕ್ರಮದ ವರದಿಯನ್ನು ಮಂಡಿಸಿದರು.

    ವಿದ್ಯಾರ್ಥಿಗಳಾದ ನಿಶಿತಾ ಸ್ವಾಗತಿಸಿ ಮಾನಸ ವಂದಿಸಿದರು. ಭಾವನಾ ಮತ್ತು ಚೈತ್ರ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment